Kannada NewsLatest

ಬೆಳಗಾವಿಯ ರಾಜಶ್ರೀ ಹಲಗೇಕರ್ ಪತಿ ನಾಗರಾಜ ಯಾದವ ವಿಧಾನಪರಿಷತ್ತಿಗೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಧಾನ ಪರಿಷತ್ತಿಗೆ ಕಾಂಗ್ರೆಸ್ ನಿಂದ ಇಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ. ನಾಗರಾಜ ಯಾದವ ಮತ್ತು ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಫೈನಲ್ ಮಾಡಲಾಗಿದೆ.

ಅಬ್ದುಲ್ ಜಬ್ಬಾರ ಈ ಹಿಂದೆ 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ನಾಗರಾಜ ಯಾದವ ಸಧ್ಯ ಕೆಪಿಸಿಸಿ ವಕ್ತಾರರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಪಕ್ಷ ನಿಷ್ಠೆಗೆ ಟಿಕೆಟ್ ಒಲಿದಿದೆ. ಶಾಸಕರಿಂದ ಆಯ್ಕೆಯಾಗುವ ದ್ವೈ ವಾರ್ಷಿಕ ಚುನಾವಣೆಗೆ ಈ ಹೆಸರನ್ನು ಪ್ರಕಟಿಸಲಾಗಿದ್ದು, ಇಬ್ಬರ ಆಯ್ಕೆಯೂ ಖಚಿತವಾಗಿದೆ.

ನಾಗರಾಜ ಯಾದವ ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಹಲಗೇಕರ್ ಅವರ ಪತಿ. ಜೊತೆಗೆ ಕನ್ನಡಪರ ಹೋರಾಟಗಾರರು ಕೂಡ. ಬೆಳಗಾವಿ ಜೊತೆಗೆ ಅವರ ಸಂಬಂಧ ಗಾಢವಾಗಿದೆ. ಅವರು ಈ ಹಿಂದೆ ಬಿಎಂಟಿಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಟಿವಿ ಮಾಧ್ಯಮಗಳ ಚರ್ಚಿಯಲ್ಲಿ ಕಾಂಗ್ರೆಸ್ ಪರ ವಾದಿಸುವುದರಲ್ಲಿ ನಾಗರಾಜ ಯಾದವ ಹೆಸರು ಮಾಡಿದ್ದಾರೆ.

ನಾಗರಾಜ ಯಾದವ ಅವರ ಆಯ್ಕೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪಾತ್ರ ದೊಡ್ಡದಿದೆ.

Home add -Advt

​ಕ್ಷೇತ್ರಕ್ಕೆ ಅನೇಕ ದೊಡ್ಡ ಯೋಜನೆಗಳನ್ನು ತರಲು ಪ್ರಯತ್ನ – ಲಕ್ಷ್ಮೀ ಹೆಬ್ಬಾಳಕರ್​ 

Related Articles

Back to top button