Kannada NewsLatest

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ದೂಧಗಂಗಾ ಪ್ರವಾಹ; ಸೇತುವೆಗಳು ಮುಳುಗಡೆ, ಸಂಚಾರ ಸ್ಥಗಿತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅವ್ಯಾಹತ ಮಳೆಗೆ  ಜಿಲ್ಲೆಯ ನದಿಗಳು  ಮಟ್ಟ ಮೀರಿ ಹರಿಯತೊಡಗಿದ್ದು ಹಲವು ಸೇತುವೆಗಳು ಮುಳುಗಡೆಯಾಗಿ  ಸಂಚಾರ ಸ್ಥಗಿತಗೊಂಡಿದೆ.

ಸದಲಗಾ ಬಳಿಯ ಮಲಿಕವಾಡ- ದಾನವಾಡ ಸೇತುವೆ  ಹಾಗೂ ಭೋಜ- ಕಾರದಗಾ ಸೇತುವೆಗಳು ದೂಧಗಂಗಾ ಪ್ರವಾಹದಲ್ಲಿ ಮುಳುಗಡೆಯಾಗಿವೆ.

ಕೃಷ್ಣಾ ನದಿಯೂ ಮಟ್ಟ ಮೀರಿ ಹರಿಯುತ್ತಿದ್ದು  ಕಲ್ಲೋಳ- ಯಡೂರ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ಹಲವು ಗ್ರಾಮಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

ಸೇತುವೆಗಳು ಮುಳುಗಡೆಯಾದ ಪ್ರದೇಶಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಾರ್ವಜನಿಕರು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಎರಡು ಬೈಕ್ ಗಳ ಡಿಕ್ಕಿ; ಒಬ್ಬ ಸಾವು, ಇನ್ನೊಬ್ಬನಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button