Kannada NewsKarnataka NewsLatest

ಶಾಲಾ ಬಸ್ ಅಡಿ ಸಿಲುಕಿ 2ನೇ ತರಗತಿ ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿ, ಆನೇಕಲ್: ತಾಲೂಕಿನ ಎಂ.ಮೇಡಹಳ್ಳಿಯಲ್ಲಿ ಟ್ಯೂಷನ್ ಮುಗಿಸಿ ಬರುವಾಗ ತನ್ನದೇ ಶಾಲೆಯ ಬಸ್​ ಅಡಿ ಸಿಲುಕಿ 2ನೇ ತರಗತಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಮೇಡಹಳ್ಳಿ ಸಾಯಿ ಪ್ಯಾರಡೈಸ್ ಬಡಾವಣೆ ನಿವಾಸಿ ದಿವ್ಯಾಂಶು ಸಿಂಗ್​ (8) ಮೃತ ಬಾಲಕ. ಈತ ಬಿದರಗೆರೆಯ ಎಸ್ಎಸ್ ವಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ. ಈತ ಗುರುವಾರ ಸಂಜೆ ಟ್ಯೂಷನ್ ಮುಗಿಸಿ ವಾಪಸಾಗುವಾಗ ಶಾಲಾ ವಾಹನದಿಂದ ಇಳಿದವನೇ ಅದರ ಎದುರಿನಿಂದ ರಸ್ತೆ ದಾಟುತ್ತಿದ್ದ.

ಈ ವೇಳೆ ಚಾಲಕ ಬಸ್ ಎದುರಿಗಿದ್ದ ಬಾಲಕನನ್ನು ಗಮನಿಸದೆ ವಾಹನ ಚಲಾಯಿಸಿದಾಗ ಚಕ್ರದಡಿ ಸಿಲುಕಿ ಅಸು ನೀಗಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button