Latest

ನಾಮಪತ್ರದಲ್ಲಿ ಸಹಿ ಹಾಕಲು ಮರೆತ ಅಭ್ಯರ್ಥಿ; ಕಣದಿಂದ ಔಟ್

ಪ್ರಗತಿವಾಹಿನಿ ಸುದ್ದಿ, ಗಂಗಾವತಿ: ಮರೆಗುಳಿತನ ಮನುಷ್ಯನಿಗೆ ಎಂತೆಂಥ ಫಜೀತಿ ತಂದೊಡ್ಡುತ್ತದೆ ಎಂಬುದಕ್ಕೆ ಇಲ್ಲಿನ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವ್ಯಕ್ತಿಯೊಬ್ಬರು ಉದಾಹರಣೆಯಾಗಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ದೇವಪ್ಪ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಾಮಪತ್ರಗಳ ಕ್ರಮಬದ್ಧತೆ ಪರಿಶೀಲನೆ ವೇಳೆಗೆ ಈ ಅಭ್ಯರ್ಥಿ ತಮ್ಮ ಸಹಿ ಹಾಕುವುದನ್ನೇ ಮರೆತು ಹೋಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅಭ್ಯರ್ಥಿಯ ನಾಮಪತ್ರ ಅಸಿಂಧುವಾಗಿದ್ದು ಇದೀಗ ಕಣದಿಂದಲೇ ಔಟ್ ಆಗಿದ್ದಾರೆ.

ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದ ಬೆಂಗಳೂರು ಮೂಲದ ಗೀತಾ ಎಂಬುವವರು ತಮ್ಮ ವಿಳಾಸ ದೃಢೀಕರಿಸುವ ದಾಖಲೆಗಳನ್ನು ಒದಗಿಸದ ಕಾರಣ ಅವರ ನಾಮಪತ್ರವೂ ಅಸಿಂಧುವಾಗಿದೆ.

https://pragati.taskdun.com/car-accidenthusbandwifedeathchildren-injuerd/
https://pragati.taskdun.com/acceptance-of-nomination-papers-of-bjp-candidate-ratna-mamani/
https://pragati.taskdun.com/d-k-shivakumarpressmeetbjplingayata/

Home add -Advt

Related Articles

Back to top button