Belagavi NewsBelgaum NewsKannada NewsKarnataka News

ಎಂಇಎಸ್ ಕಾರ್ಯಕರ್ತನ ಮನೆ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಗುಂಪು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂಇಎಸ್  ಕಾರ್ಯಕರ್ತರೊಬ್ಬರ ಮನೆ ಮೇಲೆ 25 ಕ್ಕೂ ಹೆಚ್ಚು ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಈ ಘಟನೆಯಲ್ಲಿ ಅವರ ಕುಟುಂಬದ ನಾಲ್ವರಿಗೆ ಗಾಯವಾಗಿದೆ.‌

ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಸಮೀಪದ ಭಾರತ್ ನಗರದಲ್ಲಿ ಭಾನುವಾರ ಈ ಘಟನೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದವರನ್ನು ಸಚಿನ್ ಶಾಂತಾರಾಮ್ ಕೆಲ್ವೇಕರ್ (36), ನಿತಿನ್ ಶಾಂತಾರಾಮ್ ಕೆಲ್ವೇಕರ್ (34), ಸುಂದರ್ ಶಾಂತಾರಾಮ್ ಕೆಲ್ವೇಕರ್ (32), ಮತ್ತು ಅವರ ತಾಯಿ ಲಕ್ಷ್ಮೀ ಶಾಂತಾರಾಮ್ ಕೆಲ್ವೇಕರ್ (56) ಎಂದು ಗುರುತಿಸಲಾಗಿದೆ. 

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲ್ವೇಕರ್ ಮನೆ ಮೇಲೆ ದಾಳಿಯ ಸುದ್ದಿ ತಿಳಿದ ತಕ್ಷಣ ಎಂಇಎಸ್ ಮುಖಂಡರು ಸ್ಥಳಕ್ಕೆ ಧಾವಿಸಿದ್ದಾರೆ.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button