ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನಗಳು ದೊರೆತಿಲ್ಲ: ಪ್ರಲ್ಲಾದ ಜೋಷಿ

ಪ್ರಗತಿವಾಹಿನಿ ಸುದ್ದಿ : ಈ ಬಾರಿ ಬಿಜೆಪಿಗೆ ಅಪೇಕ್ಷಿಸಿದಷ್ಟು ಸ್ಥಾನಗಳು ದೊರೆತಿಲ್ಲ. ಇನ್ನೂ ಉತ್ತರ ಭಾರತದ ಹಲವೆಡೆ ಚುನಾವಣಾ ಮತದಾನ ಎಣಿಕೆ ಪ್ರಕ್ರಿಯೆ ಬಾಕಿಯಿದೆ. ಈ ಬಗ್ಗೆ ಬಳಿಕ ಮಾತನಾಡುವುದು ಸೂಕ್ತ ಎಂದು ಬಿಜೆಪಿ ಸಚಿವ ಪ್ರಲ್ಹಾದ್ ಜೋಷಿ ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಈ ಬಾರಿ ಕಡಿಮೆಯೆಂದರೂ 18-20 ಸ್ಥಾನಗಳು ಲಭ್ಯವಾಗಲಿದೆ. ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಕೈ ಹಿಡಿದಿದೆಯೇ ಎಂಬುದಕ್ಕೆ ಇದು ಉತ್ತರವಾಗಬಲ್ಲದು. ಮತ ಎಣಿಕೆ ಸಂಪೂರ್ಣವಾಗಿ ಮುಗಿದ ಬಳಿಕ ಬಿಜೆಪಿ ಇನ್ನೂ ಎರಡು ಸ್ಥಾನಗಳಿಸುವ ಸಾಧ್ಯತೆಗಳಿವೆ ಎಂದು ಪ್ರಲ್ಹಾದ್ ಜೋಷಿ ಹೇಳಿದರು.
ಈ ಬಾರಿ ದಿಂಗಾಲೇಶ್ವರ ಸ್ವಾಮಿ ಪ್ರಲ್ಹಾದ್ ಜೋಷಿ ವಿರುದ್ದ ತೊಡೆ ತಟ್ಟಿದ್ದರು. ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದ ಬಳಿಕ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ನಾಮಪತ್ರ ಹಿಂಪಡೆದಿದ್ದರು. ಹೀಗಾಗಿ ಹುಬ್ಬಳ್ಳಿ ಲೋಕಸಭಾ ಕ್ಷೇತ್ರ ಸಹಜವಾಗಿ ಗಮನ ಸೆಳೆದಿತ್ತು.