
ಪ್ರಗತಿವಾಹಿನಿ ಸುದ್ದಿ: ಐತಿಹಾಸಿಕ ಭಗವಾನ್ ಜನ್ನಾಥ ರಥಯಾತ್ರೆ ವೇಳೆ ಅವಘಡ ಸಂಭವಿಸಿದೆ. ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಆನೆಗಳು ದಾಂದಲೆ ನಡೆಸಿದ್ದು, ಭಯ ಭೀತರಾದ ಭಕ್ತರು ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ.
ಅಹಮದಾಬಾದ್ ನಲ್ಲಿ ನಡೆಯುತ್ತಿರುವ 148ನೇ ಭಗವಾನ್ ಜಗನ್ನಾಥ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ. ರಥಯಾತ್ರೆ ನಡೆಯುತ್ತಿದ್ದ ವೇಳೆ ಮೂರು ಆನೆಗಳು ನಿಯಂತ್ರಣಕ್ಕೆ ಸಿಗದೇ ಅಡ್ಡಾಡಿಡ್ದಿಯಾಗಿ ಓಡಿ ಭಕ್ತರನ್ನು ಅಟ್ಟಡಿಸಿಕೊಂಡು ಹೋಗಿವೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಜೀವ ಭಯದಲ್ಲಿ ದಿಕ್ಕಾಪಾಲಾಗಿ ಓಡಿದ್ದಾರೆ.
ರಾಥಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಆನೆಗಳನ್ನು ನಿಯಂತ್ರಿಸಲು ಮಾಹಿತರು ಹರಸಾಹಸಪಟ್ಟಿದ್ದಾರೆ. ಕೊನೆಗೂ ಆನೆಗಳನ್ನು ನಿಯಂತ್ರಿಸಿದ್ದಾರೆ. ರಥಯಾತ್ರೆಯಲ್ಲಿ ಒಟ್ಟು 17 ಆನೆಗಳು ಮೆರವಣಿಗೆಯನ್ನು ಮುನ್ನಡೆಸುತ್ತಿದ್ದವು. ಈ ವೇಳೆ ವಾದ್ಯಶಬ್ದಗಳಿಗೆ ಕಂಗಾಲಾಗಿ ಆನೆಗಳು ಬೆದರಿ ಈ ರೀತಿ ನಡೆದುಕೊಂಡಿರಬಹುದು ಎನ್ನಲಾಗಿದೆ.