Belagavi NewsBelgaum NewsKannada NewsKarnataka NewsNationalPolitics

*ರಾಜ್ಯದ ಏಳು ಜನರಿಗೆ ಎಐಸಿಸಿ ಕಾರ್ಯದರ್ಶಿ ಸ್ಥಾನ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಐಸಿಸಿ ನೂತನ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದ್ದು, ಕರ್ನಾಟಕದ ಏಳು ಜನ ನಾಯಕರಿಗೆ ಸ್ಥಾನ ಸಿಕ್ಕಿದೆ 

ಕರ್ನಾಟಕದ ಯಾರಿಗೆ ಸ್ಥಾನ ಸಿಕ್ಕಿದೆ ಎಂದು ನೋಡುವದಾದರೆ  ಕೇರಳ ಮತ್ತು ಲಕ್ಷದ್ವೀಪ ಪಿ.ವಿ. ಮೋಹನ್, ಮನ್ಸೂರ್ ಅಲಿ ಖಾನ್, ಗೋವಾ, ದಾದ್ರಾ ಮತ್ತು ನಗರ್ ಹವೇಲಿಗೆ ಅಂಜಲಿ ನಿಂಬಾಳಕರ, ತಮಿಳುನಾಡು ಮತ್ತು ಪುದುಚೆರಿಗೆ ಸೂರಜ್ ಹೆಗ್ಡೆ, ಅನಿವಾಸಿ ಭಾರತೀಯ ಘಟಕಕ್ಕೆ ಆರತಿ ಕೃಷ್ಣ, ಮಹಾರಾಷ್ಟ್ರ ಬಿ.ಎಂ. ಸಂದೀಪ್, ಯು.ಬಿ.ವೆಂಕಟೇಶ್ ಗೆ ನೇಮಿಸಲಾಗಿದೆ.‌

ಇನ್ನೂ ಕರ್ನಾಟಕಕ್ಕೆ ರೊಜಿ ಎಂ. ಜಾನ್, ಮಯೂರ ಎಸ್‌.ಜಯಕುಮಾರ್, ಅಭಿಷೇಕ್ ದತ್, ಪಿ.ಗೋಪಿ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button