Belagavi NewsBelgaum NewsCrimeKannada NewsKarnataka NewsNational
*ಎಪಿಎಂಸಿ ಠಾಣೆ ಪೊಲೀಸ್ರಿಂದ ಮಟಕಾ ದಾಳಿ; ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಮಹಾದೇವ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಹಣ ಹಚ್ಚಿಸಿಕೊಂಡು ಓಸಿ ಜುಗಾರ ಆಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.
ನೀತಿನ ಕಿರಣ ಮನಗುತ್ತಕರ (26) ಹಾಗೂ ಮೋಹನ ಮಲ್ಲಪ್ಪ ಕಿಲ್ಲೇಕರ (35) ಎಂಬುವರನ್ನು ಬಂಧಿಸಲಾಗಿದೆ
ದಾಳಿ ವೇಳೆ ಆರೋಪಿಗಳಿಂದ 1,510 ರೂ. ನಗದು ಹಣ ಹಾಗೂ ಓಸಿ ಚೀಟಿಗಳನ್ನು ಜಪ್ತಪಡಿಸಿಕೊಂಡು ಆರೋಪಿಗಳ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.25/2026 ಕಲಂ.78(III) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.



