ಖ್ಯಾತ ವಾಸ್ತುತಜ್ಞ ಶ್ರೀಧರ ಪರಿಮಳಾಚಾರ್ಯ ಅವರಿಗೆ ಹುಕ್ಕೇರಿ ಹಿರೇಮಠದ ಗೌರವ

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ : ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಅಡಿಯಲ್ಲಿ ನಡೆಯುತ್ತಿರುವ ಪ್ರಾಥಮಿಕ ಪ್ರೌಢ ಹಾಗೂ ಸಂಸ್ಕೃತ ಕಾಲೇಜಿನ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಬಳ್ಳಾರಿಯ ಖ್ಯಾತ ವಾಸ್ತುತಜ್ಞ ಶ್ರೀಧರ ಪರಿಮಳಾಚಾರ್ಯ ಅವರಿಗೆ ಶ್ರೀಮಠದ ಗೌರವನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಧರ ಪರಿಮಳಾಚಾರ್ಯರು ಇಂದು ಹುಕ್ಕೇರಿ ಹಿರೇಮಠವು ಈ ನಾಡು ಅಷ್ಟೇ ಅಲ್ಲ ಹೊರದೇಶದಲ್ಲೂ ತನ್ನ ಕಂಪನ್ನು ಬೀರಿದೆ. ಅದರಲ್ಲೂ ಮಠಾದ್ಯಕ್ಷರಾದ ಚಂದ್ರಶೇಖರ ಶಿವಾಚಾರ್ಯರು ಈ ನಾಡು ಕಂಡಂತಹ ಅಪರೂಪದ ಸಂತರು. ಅಂತವರ ಮಾರ್ಗದರ್ಶನ, ಸೇವೆ ಈ ನಾಡಿಗೆ ಬೇಕಾಗಿರುವುದು ಅತ್ಯವಶ್ಯಕ. ಆ ನಿಟ್ಟಿನಲ್ಲಿ ನನ್ನನ್ನು ಕರೆಯಿಸಿ ನನ್ನ ಸಾಧನೆಯನ್ನು ಗುರುತಿಸಿ ಗೌರವ ನೀಡಿದ್ದು ನನಗೆ ತಂಬಾ ಸಂತಸವನ್ನುಂಟು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button