Latest

ಯುವತಿಗೆ ಚಾಕು ಇರಿತ; ಪಾಗಲ್ ಪ್ರೇಮಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಪಾಗಲ್ ಪ್ರೇಮಿಯನ್ನು ಬಂಧಿಸಿದ್ದಾರೆ.

ಉದಯ್ ಬಂಧಿತ ಆರೋಪಿ. ಯುವತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಉದಯ್ ಆಕೆಯ ಕುತ್ತಿಗೆ ಹಾಗೂ ತೊಡೆಭಾಗಕ್ಕೆ ಬಲವಾಗಿ ಇರಿದು ಕೊಲೆ ಮಾಡಲು ಯತ್ನಿಸಿದ್ದ.

ತನ್ನದೇ ಕಾಲೇಜಿನ ಸಿನಿಯರ್ ನ್ನು ಪ್ರೀತಿಸುತ್ತಿದ್ದ ಯುವಕ 2018ರಿಂದ ಯುವತಿಯ ಹಿಂದೆ ಬಿದ್ದಿದ್ದ. ಯುವತಿ ಪೋಷಕರು ಕೂಡ ಉದಯ್ ಗೆ ಎಚ್ಚರಿಕೆ ಕೊಟ್ಟಿದ್ದರು. ಅಲ್ಲದೇ ತಮ್ಮ ಮಗಳನ್ನು ಬೇರೆ ಕಾಲೇಜಿಗೂ ಸೇರಿಸಿದ್ದರು. ಆದರೂ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಯುವತಿ ಹುಟ್ಟುಹಬ್ಬದಂದು ತನ್ನನ್ನು ಪ್ರೀತಿಸದಿದ್ದರೆ ಒಂದು ವರ್ಷದೊಳಗೆ ನಿನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಆಗಸ್ಟ್ 25ರಂದು ಯುವತಿಗೆ ಚಾಕುವಿನಿಂದ ಇರಿದು, ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದ. ಗಾಯಾಳು ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

Related Articles

Back to top button