Kannada NewsKarnataka NewsLatest

ಮಟ್ಕಾ ಅಡ್ಡೆ ಮೇಲೆ ದಾಳಿ: ಬುಕ್ಕಿ ಸೇರಿ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಶಹಾಪುರ ಠಾಣೆ ಪೊಲೀಸರು ಮಟಕಾ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಬುಕ್ಕಿ ಸಮೇತ ಮೂವರನ್ನು ಬಂಧಿಸಿದ್ದಾರೆ.

ಬೆಳಗಾವಿ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರ್ವೆಕರಗಲ್ಲಿ ಭಂಗಿ ಬೋಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವರು  ಓ.ಸಿ/ಮಟಕಾ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ,  ಶಹಾಪೂರ ಪೊಲೀಸ್ ಠಾಣೆಯ ಪಿಐ  ರಾಘವೇಂದ್ರ ಬ ಹವಲ್ದಾರ, ಮತ್ತು  ಸಿಬ್ಬಂದಿಗಳಾದ ಯು. ಟಿ. ಪಾಟೀಲ, ಎಎಸ್‌ಐ. ಎಸ್.ಆರ್.ದೊಡ್ಡನಾಯ್ಕರ, ಎ. ವ್ಹಿ. ನೀಲಪ್ಪನವರ, ಎನ್. ಸಿ. ತುರಮಂದಿ, ಎಮ್. ಎಮ್. ನದಾಫ್, ಎಸ್.ಎಮ್.ಕಾಂಬಳೆ, ಹನಮಂತ ವಿಭೂತಿ, ಎ. ಪಿ. ಖೋತ, ವ್ಹಿ. ಎಲ್. ಬುಶಿ ದಾಳಿ ಮಾಡಿದರು.

ಮಟಕಾ ಆಡುತ್ತಿದ್ದ  ವಿಶ್ವನಾಥ ಮ್ಯಾಗಿನಮನಿ (೩೪) (ಹರಿಜನವಾಡಾ, ಶಹಾಪೂರ, ಬೆಳಗಾವಿ), ಕೃಷ್ಣಾ ಉಪರಿ, (೫೮) (ಸಾ|| ಖಾಸಭಾಗ, ಶಹಾಪೂರ, ಬೆಳಗಾವಿ) ಇವರನ್ನು ಬಂಧಿಸಿ ಅವರಿಂದ ಒಟ್ಟು ರೂ.೨೩,೩೬೦/- ಹಣ ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿತರಿಂದ ಓ.ಸಿ ಅಂಕಿ ಸಂಖ್ಯೆ ಚೀಟಿ ಮತ್ತು ಹಣವನ್ನು ತೆಗೆದುಕೊಳ್ಳುವ ಓ.ಸಿ ಬುಕ್ಕಿ ಪ್ರಮೋದ ಧಾಮಣೇಕರ, (ಸಾ|| ಬಾಂದೂರಗಲ್ಲಿ, ಬೆಳಗಾವಿ) ಎನ್ನುವವನನ್ನು ಸಹ ಬಂಧಿಸಿ, ಅವರ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Home add -Advt

Related Articles

Back to top button