Latest

*ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಕೇಸ್; ಆರೋಪಿ ಅರೆಸ್ಟ್*

 

ಪ್ರಗತಿವಾಹಿನಿ ಸುದ್ದಿ; ಸಾಗರ: ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಮೀರ್ ಬಂಧಿತ ಆರೋಪಿ. ಆರೋಪಿ ಸಮೀರ್ ಬಂಧನಕ್ಕಾಗಿ ಸಾಗರ ಪೊಲೀಸರು ಮೂರು ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದರು. ತಡರಾತ್ರಿ ಶಿವಮೊಗ್ಗದಲ್ಲಿ ಸಮೀರ್ ನನ್ನು ಬಂಧಿಸಲಾಗಿದ್ದು, ವಿಚಾರಣೆ ತೀವ್ರಗೊಂಡಿದೆ.

Home add -Advt

ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಸಮೀರ್ ದಾಳಿ ನಡೆಸಿ ಮಚ್ಚು ಬೀಸಿದ್ದ. ಸುನೀಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಸಾಗರದ ಬಿ.ಹೆಚ್.ರಸ್ತೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿತ್ತು.

ಆರೋಪಿ ಬಂಧನಕ್ಕೆ ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇಂದು ಸಾಗರ ಪಟ್ಟಣ ಬಂದ್ ಗೆ ಕರೆ ನೀಡಿದ್ದರು. ಇದೀಗ ಆರೋಪಿ ಸಮೀರ್ ನನ್ನು ಬಂಧಿಸಲಾಗಿದೆ.

*ಮುಂದುವರೆದ ಶೀತಗಾಳಿ, ದಟ್ಟಮಂಜು; ವಿಮಾನ, ರೈಲು ಸಂಚಾರ ರದ್ದು*

https://pragati.taskdun.com/delhi-cold-wave-imdfog-alerttrainflight-cannceled/

Related Articles

Back to top button