Belagavi NewsBelgaum NewsKarnataka News

*ಅಡವಿಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಷಡ್ಯಂತ್ರವಾಗಿದೆ: ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಡವಿಸಿದ್ದೇಶ್ವರ ಮಠದ ಸ್ವಾಮೀಜಿ ಅವರು ಮಹಿಳೆ ಜೋತೆ ಮಠದಲ್ಲಿ ಸಿಕ್ಕಿಬಿದ್ದ ಪ್ರಕರಣದ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸ್ವಾಮೀಜಿ ಮೇಲಿನ ಆಪಾದನೆ ಎಲ್ಲವು ಸುಳ್ಳು ಎಂದು ತಿಳಿಸಿದ್ದಾರೆ. 

ಗೋಕಾಕನಲ್ಲಿ ಸುತ್ತಮುತ್ತಲಿನ ಮಾಠಾಧಿಷರ ಸುಮ್ಮುಖದಲ್ಲಿ ನಡೆದ ಸಭೆ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಅಡವಿಸಿದ್ದೇಶ್ವರ ಸ್ವಾಮೀಜಿ, ಮಹಿಳೆ ವಿಚಾರವಾಗಿ ಪೊಲೀಸರು ವರದಿ ಸಲ್ಲಿಸಿದ್ದಾರೆ. ಅವರು ಯಾವುದೆ ತಪ್ಪು ಮಾಡಿಲ್ಲ. ಕುಡಿದು ಗಲಾಟೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಈ ಘಟನೆಯಿಂದ ಸ್ವಾಮೀಜಿಗೆ ನೋವಾಗಿದೆ. ಪೂಜ್ಯರ ಮೇಲೆ ಇಲ್ಲಸಲ್ಲದ ಆರೋಪ ಬೇಡ. ಮರಳಿ ಅವರು ಮಠಕ್ಕೆ ತೆರಳಿದ್ದಾರೆ ಎಂದರು.

Home add -Advt

Related Articles

Back to top button