Cancer Hospital 2
Beereshwara 36
LaxmiTai 5

*ಮಂಗಾಯಿದೇವಿ ಜಾತ್ರೆ ಸಂದರ್ಭದಲ್ಲಿ ಪ್ರಾಣಿ/ಪಕ್ಷಿ ಬಲಿ ನಿಷೇಧ: ಡಿಸಿ ನಿತೇಶ್ ಪಾಟೀಲ್*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ಪ್ರಸಿದ್ಧ ಶ್ರೀ ಮಂಗಾಯಿದೇವಿ ಜಾತ್ರೆ ಸಂದರ್ಭದಲ್ಲಿ, ದೇವಸ್ಥಾನದ ಆವರಣದಲ್ಲಿ ಅಥವಾ ವಡಗಾಂವಿಯ ವ್ಯಾಪ್ತಿಯಲ್ಲಿ ಭಕ್ತಾಧಿಗಳು ಪ್ರಾಣಿ ಬಲಿ ಮಾಡುವಂತಿಲ್ಲ ಎಂದು ಡಿಸಿ ನಿತೇಶ್ ಪಾಟೀಲ ಅವರು, ಆದೇಶ ಹೊರಡಿಸಿದ್ದಾರೆ.‌

Emergency Service

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ನಿಯಮಗಳು 1963 ರನ್ವಯ ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ/ಪಕ್ಷಿಗಳ ಬಲಿ ನೀಡುವುದು ಕಾನೂನಿಗೆ ವಿರೋಧವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ 1973 ರ ಸಿ.ಆರ್.ಪಿ.ಸಿ 144 (1) (3) ರಡಿಯಲ್ಲಿ  ಬೆಳಗಾವಿ ನಗರದ ವಡಗಾಂವಿಯಲ್ಲಿ ಜೂನ್ 27 ರಿಂದ 30 ರ ವರೆಗೆ ಜರುಗುವ ಶ್ರೀ ಮಂಗಾಯಿದೇವಿ ಜಾತ್ರೆ-ಹಬ್ಬದ ಸಂದರ್ಭದಲ್ಲಿ, ದೇವಸ್ಥಾನದ ಆವರಣದಲ್ಲಿ ಅಥವಾ ವಡಗಾಂವಿಯ ವ್ಯಾಪ್ತಿಯಲ್ಲಿ ಭಕ್ತಾಧಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ/ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Bottom Add3
Bottom Ad 2