Latest

ಕೆರೆಗೆ ಬಿದ್ದು ಯುವತಿ ಸಾವು

ಪ್ರಗತಿವಾಹಿನಿ ಸುದ್ದಿ; ಬಂಟ್ವಾಳ: ದೇವರಿಗೆ ಹೂ ತರಲೆಂದು ಹೋದ ಯುವತಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರಾಜೆ ಎಂಬಲ್ಲಿ ನಡೆದಿದೆ.

ಕಾರಾಜೆ ನಿವಾಸಿ ರಶ್ಮಿತ (24) ಮೃತ ಯುವತಿ ಎಂದು ಗುರುತಿಸಲಾಗಿದೆ. ರಶ್ಮಿತಾ ಬೆಳಿಗ್ಗೆ ದೇವರಿಗೆ ಹೂ ಕೊಯ್ಯಲೆಂದು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಈ ದುರಂತ ಸಂಭವಿಸಿದೆ.

ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Home add -Advt

ರಾಜಧಾನಿ ಬೆಂಗಳೂರಿನಲ್ಲಿ ಭೂಕಂಪನ; ಬೆಚ್ಚಿಬಿದ್ದ ಜನರು

Related Articles

Back to top button