Latest

88 ವರ್ಷಗಳ ಬಳಿಕ ಭರ್ತಿಯಾದ ವಾಣಿವಿಲಾಸ ಸಾಗರ: ಸಂಪದ್ಭರಿತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಎಂದ ಸಿಎಂ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಇನ್ನುಮುಂದೆ ವಾಣಿವಿಲಾಸ ವಾಟರ್ ಗ್ರಿಡ್ ಗೆ ನೀರು ಸದಾ ಬರುವಂತೆ ಮಾಡಿ ಬರಡು ಕರ್ನಾಟಕ ಎಂಬ ಹೆಸರನ್ನು ಅಳಿಸಿ ಸಂಪದ್ಭರಿತ ಕರ್ನಾಟಕ ವನ್ನಾಗಿ ಪರಿವರ್ತಿಸಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಾಣಿವಿಲಾಸಸಾಗರಕ್ಕೆ ಬಾಗಿನ ಅರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇದೊಂದು ಐತಿಹಾಸಿಕ ಕ್ಷಣ, ಸ್ವಾತಂತ್ರ್ಯ ನಂತರ 75 ವರ್ಷಗಳ ನಂತರ ಬಾಗಿನ ನೀಡುವ ಸೌಲಭ್ಯ ನಮ್ಮೆಲ್ಲರಿಗೂ ಲಭಿಸಿದೆ. ಮಹಾರಾಜರ ಕಾಲದಲ್ಲಿ ಕಟ್ಟಿರುವ ವಾಣಿವಿಲಾಸ ಸಾಗರ ಅತ್ಯಂತ ಭವ್ಯ ಹಾಗೂ ಉಪಯುಕ್ತವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಯೋಜಿಸಿ ತಳಹಂತದ ಜಮೀನುಗಳಿಗೆ ಈಗಾಗಲೇ ಹನಿ ನೀರಾವರಿ ಯೋಜನೆ ರೂಪಿಸಲಾಗಿದೆ. ಈ ಕಾರ್ಯವನ್ನು ಸಂಪೂರ್ಣ ಮಾಡಿ ಭಾರತ ಸರ್ಕಾರದ ಹೂಡಿಕೆ ಮಂಡಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಅನುಮೋದಿಸಿದ್ದು ಬರುವ ದಿನಗಳಲ್ಲಿ ಕೇಂದ್ರ ಸಂಪುಟದ ಅನುಮೋದನೆ ಆದ ಕೂಡಲೇ ನಮಗೆ 16 ಸಾವಿರ ಕೋಟಿ ರೂ.ಗಳಷ್ಟು ಅನುದಾನ ಒದಗಿ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಮೈಸೂರು ಅರಸರ ಕುಟುಂಬಕ್ಕೆ ಕೃತಜ್ಞತೆ
88 ವರ್ಷಗಳಿಗೂ ಮುನ್ನ ವಾಣಿವಿಲಾಸ ಸಾಗರ ತುಂಬಿತ್ತು. ನಂತರ ಈ ವರ್ಷ ತುಂಬಿ ಹರಿದಿದೆ. ಇದೊಂದು ರೀತಿಯಲ್ಲಿ ನಮ್ಮ ಕೇಂದ್ರ ಕರ್ನಾಟಕದ ನೀರು ಸಂಗ್ರಹ ಗ್ರಿಡ್ ಇದು. ಇದನ್ನು ತುಂಬಿಸುವ ಮೂಲಕ ಚಿತ್ರದುರ್ಗ, ತುಮಕೂರು ದಾವಣಗೆರೆ ಭಾಗಗಳಲ್ಲಿ ನೀರಾವರಿ ಸೌಲಭ್ಯ ನೀಡಲು ಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಈ ಭಾಗದ ಪಶ್ಚಿಮ ಘಟ್ಟಗಳಿಂದ ಬರುವ ನೀರನ್ನು ಶೇಖರಣೆ ಮಾಡಿ ಎಲ್ಲರಿಗೂ ಒದಗಿಸಬೇಕೆಂದು ಆರ್ಥಿಕ ಸಂಕಷ್ಟವಿದ್ದರೂ ಕೂಡ ತಮ್ಮ ಮನೆತನದ ಒಡವೆಗಳನ್ನು ಮಾರಿ ಕಟ್ಟಿರುವುದನ್ನು ನಾವು ಮರೆಯಲು ಸಾಧ್ಯವಿಲ್ಲ. ಇಡೀ ಒಡೆಯರ ಕುಟುಂಬಕ್ಕೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.

Home add -Advt

ದೇಶದ ಸುರಕ್ಷತೆಯ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ
18 ಸ್ಲೀಪರ್ ಸೆಲ್ ಗಳನ್ನು ಪತ್ತೆ ಹಚ್ಚಿ ತಿಹಾರ್ ಜೈಲಿಗೆ ಕರ್ನಾಟಕ ಪೊಲೀಸ್ ಕಳಿಸಿದ್ದಾರೆ. ಆದರೂ ತಮ್ಮ ಪ್ರಯತ್ನಗಳನ್ನು ಕೆಲವರು ಹೊರ ರಾಜ್ಯಗಳ ಸಂಪರ್ಕ ಬೆಳೆಸಿ ಇಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರು. ಈಗಾಗಲೇ ಹಿರರಾಜ್ಯದಿಂದ ಬರುವವರನ್ನು ಹಿಡಿಯಲಾಗಿದೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿದ್ದೇವೆ. ಈಗ 24 ಗಂಟೆಗಳೊಳಗೆ ಸಿಕ್ಕಿ ಬಿದ್ದವನ ಹಿಂದಿರುವ ಸಂಸ್ಥೆಯ ಹೆಸರು ಬೇಧಿಸಲು ಎನ್.ಎ. ಐ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಮತದಾರರ ಪಟ್ಟಿಯಿಂದ 27 ಲಕ್ಷ ಹೆಸರು ಡಿಲಿಟ್; ಸಹಿ ಹಾಕಿದ್ದು ಯಾರು? ಅಕ್ರಮ ಮಾಡಿಸಿದ್ದು ಯಾರು?

https://pragati.taskdun.com/d-k-shivakumarvoter-id-scamreaction/

 

Related Articles

Back to top button