Latest

ಶಾಲೆ ಆರಂಭ: ಮಕ್ಕಳ ಹಕ್ಕುಗಳ ಆಯೋಗದ ಚಿಂತೆಯೇ ಬೇರೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸಬೇಕೋ ಬೇಡವೋ ಎನ್ನುವ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯ ಮರ್ರಕ ಹಕ್ಕುಗಳ ರಕ್ಷಣಾ ಆಯೋಗ ವಿಚಿತ್ರ ಸಲಹೆ ನೀಡಿದೆ.

ಶಾಲೆ ಆರಂಭವಾದರೆ ಏನಾಗಬಹುದು ಎನ್ನುವ ಚಿಂತೆ ಮಾಡುವ ಬದಲು ಶಾಲೆ ಆರಂಭವಾಗದಿದ್ದರೆ ಏನಾಗಲಿದೆ ಎಂದು ಆಯೋಗ ಹೇಳಿದೆ. ಮಕ್ಕಳ ಜೀವಕ್ಕಿಂತ ಬೇರೆ ಸಮಸ್ಯೆಗಳನ್ನೇ ಆಯೋಗ ದೊಡ್ಡದಾಗಿ ಮಾಡಿ ಶಾಲೆ ಆರಂಭಿಸುವಂತೆ ಶಿಫಾರಸ್ಸು ಮಾಡಿದೆ.

ಶಾಲೆಗಳನ್ನು ಆರಂಭಿಸದಿದ್ದರೆ ಬಾಲ್ಯವಿವಾಹ ಹೆಚ್ಚಬಹುದು, ಬಾಲಕಾರ್ಮಿಕರ ಸಂಖ್ಯೆ ಹೆಚ್ಚಬಹುದು ಎಂದು ಮಕ್ಕಳ ಹಕ್ಕುಗಳ ಆಯೋಗ ಹೇಳಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವುದೇ ಸೂಕ್ತ ಎಂದು ಆಯೋಗ ಹೇಳಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button