Belagavi NewsBelgaum NewsKarnataka NewsLatest
*ನೀರಿನ ಟ್ಯಾಂಕ್ ಬಳಿ ಅಕ್ರಮ ಶೆಡ್ ನಿರ್ಮಿಸಿ ಮದ್ಯ ಸೇವನೆಗೆ ಅವಕಾಶ: ಓರ್ವ ಆರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಸ್ಥಳದಲ್ಲಿ ಇದ್ದ ನೀರಿನ ಟ್ಯಾಂಕ್ ಬಳಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ ಮದ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಭೂಪನನ್ನು ಬೆಳಗಾವಿ ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೈಲಾಸನಗರದ ಸಿದ್ದಪ್ಪ ಭೀಮಪ್ಪ ಹಣಬರಟ್ಟಿ ಬಂಧಿತ ಆರೋಪಿ. ಸ್ವಂತ ಲಾಭಕ್ಕಾಗಿ ಕೈಲಾಶ ನಗರದ ನೀರಿನ ಟ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ
ಯಾವುದೇ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ.
ಮಾರಿಹಾಳ ಠಾಣೆ ಎ ಎಸ್ ಐ ಎಂ. ಎಸ್. ರುದ್ರಾಪೂರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮದ್ಯದ ಪ್ಯಾಕೇಟ್ ಗಳನ್ನು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.