Kannada NewsKarnataka NewsLatest

*ತಿಗಣೆ ಔಷಧಿ ವಾಸನೆಗೆ ಪಿಜಿ ಕೊಠಡಿಯಲ್ಲಿಯೇ ಸಾವನ್ನಪ್ಪಿದ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ: ತಿಗಣೆ, ಜಿರಳೆ, ಹಲ್ಲಿ ಇಂತಹ ಕೀಟಗಳು ಬಾರದಿರಲಿ ಎಂದು ಸಿಂಪಡಿಸುವ ಔಷಧಗಳು ಮನುಷ್ಯನಿಗೆ ಅದೆಷ್ಟು ವಿಷಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿ. ತಿಗಣೆ ಔಷಧಿ ವಾಸನೆಯಿಂದ ವಿದ್ಯಾರ್ಥಿಯೊಬ್ಬ ವಾಸವಾಗಿದ್ದ ಪಿಜಿ ಕೊಠಡಿಯಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೆಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಜಿಯಲ್ಲಿ ಈ ದುರಂತ ಸಂಭವಿಸಿದೆ. ಬಿಟೆಕ್ ವಿದ್ಯಾರ್ಥಿ ಪವನ್ ಮೃತ ಯುವಕ. ಆಂಧ್ರಪ್ರದೇಶದ ತಿರುಪತಿ ಮೂಲದ ಪವನ್ ಬಿಟೆಕ್ ಓದಲೆಂದು ಬೆಂಗಳೂರಿನ ಹೆಚ್ ಎ ಎಲ್ ಬಳಿ ಪಿಜಿಯಲ್ಲಿ ವಾಸವಾಗಿದ್ದ. ನಿನ್ನೆ ಪಿಜಿಯ ರೂಮುಗಳಿಗೆ ಸಿಬ್ಬಂದಿಗಳು ತಿಗಣೆ ಔಷಧಿ ಸಿಂಪಡಿಸಿದ್ದರಂತೆ. ಈ ವಿಚಯ ಗೊತ್ತಾಗದೇ ಪವನ್ ಪಿಜಿಯ ರೂಮಿಗೆ ಬಂದು ಮಲಗಿದ್ದ. ಔಷಧಿ ವಾಸನೆಯಿಂದ ಅಸ್ವಸ್ಥಗೊಂಡಿರುವ ಪವನ್ ಇಂದು ರೂಮಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದಾನೆ.

Home add -Advt

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.


Related Articles

Back to top button