Kannada NewsKarnataka NewsLatest

ಬೆಂಗಳೂರು, ಮುಂಬೈ ರೀತಿಯಲ್ಲೇ ಬೆಳಗಾವಿಗೂ ಕನೆಕ್ಟಿವಿಟಿ -ಅಂಗಡಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

 ಬೆಳಗಾವಿ ಮತ್ತು ಕೆಎಸ್‌ಆರ್ ಬೆಂಗಳೂರು ಇವರ ಸಯುಕ್ತ ಆಶ್ರಯದಲ್ಲಿ ವಿಶೇಷ ಹೊಸ ರೈಲು ಸಂಖ್ಯೆ ೦೬೫೨೬ ರ ಉದ್ಘಾಟನಾ ಸಮಾರಂಭಕ್ಕೆ ಜೂನ್ ೨೯ ರಂದು ನೈರುತ್ಯ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಚಾಲನೆ ನೀಡಿದರು.

ಮುಂಬೈ, ಬೆಂಗಳೂರು ಮಾದರಿಯಲ್ಲೇ ಬೆಳಗಾವಿಗೂ ಕನೆಕ್ಟಿವಿಟಿ ಆಗಲಿದೆ. ವಿಶ್ವದೊಂದಿಗೆ ಬೆಳಗಾವಿ ಸಂಪರ್ಕ ಸಾಧ್ಯವಾಗಲಿದೆ ಎಂದು ಸುರೇಶ ಅಂಗಡಿ ಹೇಳಿದರು.

Home add -Advt

ಬೆಳಗಾವಿ ರಾಜಕಾರಣಿಗಳಲ್ಲೂ ಒಗ್ಗಟ್ಟು ಬರಬೇಕು. ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಬೇಕು. ಮುಂದಿನ ದಿನಗಳಲ್ಲಿ ಬೆಳಗಾವಿ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದುವಂತೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು. 

ಮುಂದಿನ ದಿನಗಳಲ್ಲಿ ರೈಲ್ವೆ ಸಭೆಗಳಿಗೆ ಸುವರ್ಣ ವಿಧಾನಸೌಧ ಬಳಕೆ ಮಾಡಲಾಗುವುದು ಎಂದೂ ಅವರು ಹೇಳಿದರು. 

ಈ ವಿಶೇ, ರೈಲಿಗೆ ಬೆಳವಡಿ ಮಲ್ಲಮ್ಮನ ಹೆಸರಿಡಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಲಹೆ ನೀಡಿದರು. 

ಈ ಸಂಧರ್ಭದಲ್ಲಿ ರಾಜ್ಯ ಸಭಾ ಸದಸ್ಯರಾದ ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಆನಂದ ಮಾಮನಿ ದುರ್ಯೋಧನ ಐಹೋಳೆ, ಅನೀಲ ಬೆನಕೆ,  ಲಕ್ಷ್ಮೀ ಹೆಬ್ಬಾಳಕರ, ಗಣೇಶ ಹುಕ್ಕೇರಿ,   ರೇಲ್ವೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Related Articles

Back to top button