Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಮತ್ತೊಂದು ದುರಂತ; ವಿದ್ಯುತ್ ಸ್ಪರ್ಶಿಸಿ ತಂದೆ-ಮಗ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಅಥಣಿ: ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ-ಮಗು ಸಜೀವ ದಹನಗೊಂಡ ಘಟನೆ ಮಾಸುವ ಮುನ್ನವೇ ಬೆಳಗಾವಿಯಲ್ಲಿಯೂ ಇಂತದ್ದೇ ದುರಂತ ಸಂಭವಿಸಿದೆ. ಜಮೀನಿಗೆ ಹೋಗಿದ್ದ ತಂದೆ-ಮಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಪಂಪ್ ಸೆಟ್ ಬಂದ್ ಮಾಡಲು ತೆರಳಿದ್ದ ತಂದೆ ಹಾಗೂ ಮಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. 32 ವರ್ಷದ ಮಲ್ಲಿಕಾರ್ಜುನ ಸದಾಶಿವ ಹಾಗೂ 6 ವರ್ಷದ ಮಗ ಪ್ರೀತಮ್ ಮೃತರು. ಬಾಲಕ ಪ್ರೀತಮ್ ಅಥಣಿಯ ಶಾರದಾ ಮಾತಾ ವಿದ್ಯಾಲಯದ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದ.

Related Articles

ಪಂಪ್ ಸೆಟ್ ಬಂದ್ ಮಾಡಲೆಂದು ತಂದೆಯ ಜೊತೆ ಬಾಲಕ ಪ್ರೀತಮ್ ಕೂಡ ತೆರಳಿದ್ದ. ರಸ್ತೆ ಮಧ್ಯೆ ವಿದ್ಯುತ್ ಕೇಬಲ್ ಕಟ್ಟಾಗಿದ್ದು, ಸ್ಥಳದಲ್ಲಿ ತೇವಾಂಶವಿದ್ದ ಕಾರಣ ಗೊತ್ತಾಗದೇ ಅದೇ ಜಾಗದಲ್ಲಿ ತಂದೆ-ಮಗ ಹೆಜ್ಜೆ ಇಡುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯಲ್ಲಿ ಬಾಲಕನೊಬ್ಬ ಕಾರು ತೊಳೆಯುತ್ತಿದ್ದಾಗ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಘಟನೆ ಬೆನ್ನಲ್ಲೇ ಬೆಳಗಾವಿಯಲ್ಲಿ ವಿದ್ಯುತ್ ತಂತಿಗೆ ತಂದೆ-ಮಗ ಬಲಿಯಾಗಿದ್ದಾರೆ.

Home add -Advt


Related Articles

Back to top button