Belagavi NewsBelgaum News

*ಬೆಳಗಾವಿಯಲ್ಲಿ ಮತ್ತೊಂದು ದುರಂತ: ಬಾಲಕ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಈಜಲು ಹೋದ ಬಾಲಕನೊಬ್ಬ ಕೆರೆಯ ನೀರು ಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ವಾಘವಡೆ ಗ್ರಾಮದಲ್ಲಿ ನಡೆದಿದೆ.

ಗಣೇಶ ಹರಾಮಣಿ ಸುತಾರ (15) ಮೃತ ಬಾಲಕ. ನಿನ್ನೆ ಶಾಲೆಗೆ ರಜೆ ಇದ ಕಾರಣ ಬಾಲಕ ಕೆರೆಯಲ್ಲಿ ಈಜಲು ಹೋಗಿದ್ದಾನೆ. ನಿನೆ ಇಡೀ ದಿನ ಬಾಲಕ ಮನೆಗೆ ಬಂದಿಲ್ಲ. ಈ ವೇಳೆ ಮನೆಯವರು ಬಾಲಕನನ್ನು ಊರೆಲ್ಲ ಹುಡುಕಿದ್ದಾರೆ. ಕೆರೆಯಬಳಿ ಬಾಲಕನ ಬಟ್ಟೆ ಪತ್ತೆಯಾಗಿತ್ತು. ಅನುಮನಗೊಂಡು ಪರಿಶೀಲಿಸಿದಾಗ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ.

ವಡಗಾಂವ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದೆ.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button