Belagavi NewsBelgaum NewsKarnataka News

*ನಾವು ನಮ್ಮ ಸಂಸ್ಕೃತಿ ಧರ್ಮವನ್ನು ಇಟ್ಟುಕೊಂಡು ಮುನ್ನಡೆಯಬೇಕಿದೆ: ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ*

ಪ್ರಗತಿವಾಹಿನಿ ಸುದ್ದಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಜಾತಿ, ಊರು, ಭಾಷೆ ಕೇಳಲಿಲ್ಲ. ಹಿಂದು ಎಂದು ಹೇಳಿದಾಗ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಾವು ನಮ್ಮ ಸಂಸ್ಕೃತಿ ಧರ್ಮವನ್ನು ಇಟ್ಟುಕೊಂಡು ಮುನ್ನಡೆಯಬೇಕಿದೆ ಎಂದು ಆಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜರು ಹೇಳಿದರು.


ಶನಿವಾರ ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯ ಸಭಾಂಗಣದಲ್ಲಿ ಭಾರತೀಯ ಸಂತ ಮಹಾಪರಿಷತ್ ನಲ್ಲಿ ಭಾಗಿಯಾಗಿ ಮಾತನಾಡಿದರು. ನಮ್ಮ ಹಿಂದು ಸಮಾಜದವರ ದುರ್ಬಳಕೆ ಭಯೋತ್ಪಾದಕರ ಶಕ್ತಿಯಾಗಿದೆ. ನಮ್ಮಲ್ಲಿ ಹೃದಯದಿಂದ ಒಂದಾಗಬೇಕಾಗಿದೆ. ಇಂದಿನ ಭಾರತೀಯ ಸಂತ ಮಹಾಸಭಾದ ಉದ್ದೇಶವಾಗಿದೆ ಎಂದರು.


ಬಟೆಂಗೆ ತೋ ಕಟೆಂಗೆ ಭಿನ್ನವಾದರೆ ನಾವು ತುಂಡು ತುಂಡಾಗುತ್ತೇವೆ ಎನ್ನುವುದು ಸಂತರಿಗೂ ಅನ್ವಯವಾಗುತ್ತದೆ. ಸಂತರ ಸಂಘಟನೆಯ ಸಲುವಾಗಿ ಬೇಕಾದ ಸೇವೆ ಕೊಡಿ ನಾನು ಅದನ್ನು ಮಾಡಲು ಸಿದ್ಧನಿದ್ದೇನೆ ಎಂದರು.


ಆಲಸಿ ಮನುಷ್ಯನ ಬಾಯಿಯಲ್ಲಿ ಅಮೃತ ಬಿಂದು ಬಂದಿದೆ. ಇನ್ನೊಂದು ಕಡೆ ಸಂತಸರು ಒಂದೇ ಕಡೆ ಸೇರಿದ್ದು ಅತೀವ ಸಂತಸ ತಂದಿದೆ ಎಂದರು.

Home add -Advt


ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಎಲ್ಲ ಸಂತರನ್ನು ಒಂದೇ ಕಡೆ ಸೇರಿಸಿ ಸಮಾಜ ಜಾಗೃತಿ ಮಾಡುವ ಉದ್ದೇಶದಿಂದ ಆಯೋಜಿಸಿರುವ ಈ ಸಂತ ಪರಿಷತ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ಸಂತರರು ತೋರಿಸುವ ದಿಕ್ಕುಗಳು ಸರಿಯಾಗಿರುತ್ತದೆ. ಇಡೀ ಸಮಾಜ ನಮ್ಮ ಕಡೆ ನೋಡುತ್ತಿದೆ. ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಸಂಗಮ ಸಾಕ್ಷಿಯಾಗಿದೆ. ಸಮಾಜಕ್ಕೆ ನಿಜವಾದ ಪ್ರೇರಣೆ ಸಿಗುವುದು ಸಂತರಿಂದ ಮಾತ್ರ ಸಾಧ್ಯ ಬೇರೆಯವರಿಂದಲ್ಲ. ಕರ್ನಾಟಕದಲ್ಲಿ ಎಲ್ಲ ಸಂತರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಒಟ್ಟಾಗಿ ಸೇರಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.


ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜರು ಶ್ರೀರಾಮನ ಪ್ರತಿಷ್ಠಾಪನೆ ಮಾಡುವಾ ಗುರುವಿನ ಸ್ಥಾನದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರ ಉಪವಾಸವನ್ನು ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಶ್ಲಾಘನೀಯ ಎಂದರು.


ನಮ್ಮ ಮಠದಲ್ಲಿ ನಮ್ಮ ಸಂಪ್ರದಾಯ ಇರಲಿ. ಆದರೆ ನಾವು ಒಗ್ಗಟ್ಟಾಗಿ ಭಾರತದಲ್ಲಿರುವ ನಮ್ಮವರನ್ನು ಉಳಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಬಹಳ ಅನಾಹುತವಾಗುತ್ತದೆ ಎಂದರು.


ಉಗ್ರರ ಅಟ್ಟಹಾಸಕ್ಕೆ ಖಂಡನೆ, ಮಂಡಣೆ ಸಾಲದು ಭಾರತ ಸರಕಾರ ಹಾಗೂ ರಾಜ್ಯದ ಸರಕಾರಗಳು ನಮ್ಮವರನ್ನು ಉಳಿಸಲು ಮುಂದಾಗಬೇಕು. ಇಂಥ ಕೆಲಸ ಮಾಡಿದವರಿಗೆ ಖಂಡನೇ ಮಾತ್ರವಲ್ಲ ಅವರಿಗೆ ಸರಿಯಾದ ದಂಡಣೆ ಕೊಟ್ಟರೆ ಮಾತ್ರ ನಾವು ಉಳಿಯಲು ಸಾಧ್ಯ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.


ಹಿಂದುಗಳಿಗೆ ದೈರ್ಯ ತುಂಬುವ ಕೆಲಸ ಎಲ್ಲ ಮಠಾಧೀಶರು ಮಾಡಬೇಕು. ನಾನು ಖಾವಿ ಹಾಕಿಕೊಂಡಿದ್ದೇನೆ ಎಂದರೆ ನಾನು ಹಿಂದುಗಳನ್ನು ಉಳಿಸಬೇಕು ಎಂದರು.


ಹರಿಹರ ಪುರದ ಶ್ರೀ ಲಕ್ಷ್ಮೀ ನರಸಿಂಹ ಶಾರದಾ ಕ್ಷೇತ್ರದ ಶ್ರೀ ಶಂಕರಾಚಾರ್ಯರು ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ಕೈಲಾಸಾಶ್ರಮ ಮಹಾಸಂಸ್ಥಾನ ಜಯೇಂದ್ರ ಪುರಿ ಸ್ವಾಮೀಜಿ, ಬೆಳಗಾವಿ, ಬೆಂಗಳೂರು, ಬಳ್ಳಾರಿ ಸೇರಿದಂತೆ 50 ಜನ ಎಲ್ಲ ಪರಂಪರೆಯ ಸ್ವಾಮೀಜಿ ಭಾಗಿಯಾಗಿದ್ದರು.

Related Articles

Back to top button