Belagavi NewsBelgaum NewsKannada NewsKarnataka NewsLatestUncategorized

*ಮೊಬೈಲ್ ಚಾರ್ಜ್ ಮಾಡುವಾಗ ದುರಂತ; ಕರೆಂಟ್ ಶಾಕ್ ಹೊಡೆದು ಯುವಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೊಬೈಲ್ ಚಾರ್ಜ್ ಹಾಕಲು ಹೋದಾಗ ಕರೆಂಟ್ ಶಾಕ್ ಹೊಡೆದು ಯುವಕಯೋರ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

27 ವರ್ಷದ ಶಿವದಾಸ ಸಂಕಪಾಳ ಮೃತ ಯುವಕ. ನಿಪ್ಪಾಣಿ ಇಂಡಸ್ಟ್ರಿಯಲ್ ಏರಿಯಾದ ಶ್ರೀಪೆವಾಡಿ ನಿವಾಸಿಯಾದ ಶಿವದಾಸ, ಮನೆಯಲ್ಲಿಯೇ ಮೊಬೈಲ್ ಚಾರ್ಜ್ ಇಡಲು ಹೋಗಿದ್ದಾರೆ. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮೃತ ಯುವಕನ ತಂದೆ ಮಾಹಿತಿ ನೀಡಿದ್ದು, ನಿಪ್ಪಾಣಿ ಠಾಣೆಯಲ್ಲಿ 174 ಸಿಆರ್ ಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button