Kannada NewsLatest

ಐವರು ದರೋಡೆ ಕೋರರ ಬಂಧನ; ಬೆಳಗಾವಿ ಪೊಲೀಸರ ಕಾರ್ಯಾಚಾರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೆದ್ದಾರಿಯಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಐವರು ದರೋಡೆಕೋರರನ್ನು ಬೆಳಗಾವಿ ನಗರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ದರೋಡೆಕೋರರು ಬೆಳಗಾವಿ-ಜಾಂಬೋಟಿ ಅಂತರಾಜ್ಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದರು. ಇಂದು ಬೆಳಗಿನಜಾವ 1 ಗಂಟೆ ಸುಮಾರಿಗೆ ಕಿಣಯೇ ಘಾಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವುದನ್ನು ತಿಳಿದು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಳ್ಲರು ಸಿಕ್ಕಿಬಿದ್ದಿದ್ದಾರೆ.

ಬಂಧಿತರನ್ನು ಭರನಟ್ಟಿ ಗ್ರಾಮದ ನಿಂಗಪ್ಪ, ಸಿದ್ಧಪ್ಪ ನಾಯಕ, ಭೀಮಪ್ಪ ನಾಯಕ, ಭರಮಪ್ಪ ಪೂಜಾರಿ ಹಾಗೂ ಕಮಲನಗರದ ಮಾರುತಿ ನಿಂಗಪ್ಪ ನಾಯಕ ಎಂದು ಗುರುತಿಸಲಾಗಿದೆ.

ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button