Kannada NewsLatest

ಬಡಕುಂದ್ರಿ ಮೂಲದ ಯೋಧ ಶ್ರೀನಗರದಲ್ಲಿ ನಿಧನ

ಪ್ರಗತಿ ವಾಹಿನಿ ಸುದ್ದಿ; ಬೆಳಗಾವಿ: ಭಾರತೀಯ ಸೇನೆಯ ಯೋಧ, ಶ್ರೀನಗರದ 55 ಆರ್ ಆರ್ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಮೂಲದ ಶಿವಾನಂದ ಬಾಬು ಸಿರಗಾಂವಿ (42) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ತಾಯಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಅವರ ಪಾರ್ಥಿವ ಶರೀರ ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ಸ್ವಗ್ರಾಮ ಬಡಕುಂದ್ರಿಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.

​​ಮಾವುಲಿ ದೇವಿಯ ದರ್ಶನ ಪಡೆದು, ಗ್ರಾಮದ ಸಮಸ್ಯೆ ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ

Home add -Advt

https://pragati.taskdun.com/belgaum-news/channaraja-hattiholi-visited-mavuli-devi-and-discussed-the-problem-of-the-village/

Related Articles

Back to top button