Kannada NewsLatest

ಜನರ ಅನೂಕುಲಕ್ಕಾಗಿ ಸಮುದಾಯ ಭವನ ನಿರ್ಮಾಣ: ಬಸವಪ್ರಸಾದ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಯಕ್ಸಂಬಾ ಪಟ್ಟಣದಲ್ಲಿ ಆದಿನಾಥ ದಿಗಂಬರ ಜೈನ್ ಮಂದಿರದ ಸಮುದಾಯ ಭವನವನ್ನು ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಉದ್ಘಾಟಿಸಿದರು.

ಯಕ್ಸಂಬಾ ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 2017-18 ಹಾಗೂ 2018-19 ನೇ ಸಾಲಿನ 14 ನೇ ಹಣಕಾಸು ಯೋಜನೆಯಡಿ ಮಂಜೂರಾದ ಮಹಾದೇವ ಮಂದಿರದ ಸಮುದಾಯ ಭವನ 20 ಲಕ್ಷ ರೂ. ಹಾಗೂ ಆದಿನಾಥ ದಿಗಂಬರ ಜೈನ್ ಮಂದಿರದ ಸಮುದಾಯ ಭವನ 20 ಲಕ್ಷ ರೂ. ಮತ್ತು ಮರಾಠಾ ಮಂಡಳ ಸಮುದಾಯ ಭವನ 20 ಲಕ್ಷ ರೂ .ಮೊತ್ತದಲ್ಲಿ ಮಂಜೂರಾದ ಭವನಗಳು ಇದಾಗಿವೆ.

ಬಳಿಕ ಜಲ ಶುದ್ಧಿಕರಣ ಘಟಕದ 3 ಲಕ್ಷ ಲೀ ನೀರಿನ ಸಂಗ್ರಹಣೆಯ ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಾಹಾಲಯದ (ಓವರ್ ಹೆಡ್) ಭೂಮಿ ಪೂಜೆ ನೆರವೇರಿಸಿದರು. ನಂತರ ಮಹಾದೇವ ಮಂದಿರದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 261 ಫಲಾನುಭವಿಗಳಿಗೆ ಮಂಜೂರಾದ ಮನೆಯ ಆದೇಶ ಪತ್ರಗಳನ್ನು ವಿತರಿಸಿದರು.

ಈ ವೇಳೆ ಬಸವಪ್ರಸಾದ ಜೊಲ್ಲೆ ಮಾತನಾಡಿ ಸಭೆ ಸಮಾರಂಭ ಹಾಗೂ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನೂಕೂಲವಾಗಲೂ ಸಮುದಾಯ ಭವನ ನಿರ್ಮಿಸಿದ್ದೇವೆ. ಹಾಗೂ 261 ಫಲಾನುಭವಿಗಳಿಗೆ ಮನೆ ಕಟ್ಟಲು ಪ್ರದಾನ ಮಂತ್ರಿ ಆವಾಸ ಯೋಜನೆಯಡಿ ಕೇಂದ್ರ ಸರ್ಕಾರದಿಂದ 1,50,000 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 1,25,000 ಸಾವಿರ ರೂ ಹಿಗೆ ಒಟ್ಟು 2,75,000 ಸಾವಿರ ಫಲಾನುಭವಿಗಳಿಗೆ ಮಂಜೂರಾತಿ ಆದೇಶಪತ್ರ ವಿತರಣೆ ಮಾಡಲಾಯಿತು. ನಂತರ 3 ಲಕ್ಷ ಲೀಟರ ನೀರಿನ ನೀರಿನ ಸಂಗ್ರಹಣೆಯ ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಾಹಾಲಯದ (ಓವರ್ ಹೆಡ್) ಭೂಮಿ ಪೂಜೆ ನೇರವೇರಿಸಿದ್ದು ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಕಲ್ಲಪ್ಪಾ ಜಾಧವ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀದೇವಿ ಮಠಪತಿ, ಉಪಾಧ್ಯಕ್ಷರಾದ ಗೀತಾ ನಾಯಿಕ, ಸದಸ್ಯರಾದ ಮತಾಬ ಮಕಾಂದಾರ, ಮನೋಹರ ಕುಪ್ಪಾನಟ್ಟಿ, ರಾಜು ಪಾಂಗಮ, ಉಮೇಶ ಪೋತದಾರ, ಶೀತಲ ಖೋತ, ಸುಜಾತಾ ಖೋತ, ದಯಾನಂದ ಕಾಡಾಪುರೆ, ಶಿವರಾಜ ಜೊಲ್ಲೆ, ಸುನೀಲ ಅಕ್ಕೋಳೆ, ಮಂಜುಶ್ರೀ ಕಟ್ಟಿಕರ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಶುಕ್ರವಾರ ಆರ್‌ಟಿಎಸ್ ಕಾರ್ಬೆಟೋಸಿನ್‌ನ ಜಾಗತಿಕ ಅನಾವರಣ
ಗೋಟುರ ನಾಗನೂರ ಸೇತುವೆ ಮುಳುಗಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button