Kannada NewsLatest

ಬೆಳಗಾವಿ: ಸ್ಕ್ರೂಡ್ರೈವರ್ ನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯುವಕನೊಬ್ಬನನ್ನು ಸ್ಕ್ರೂಡ್ರೈವರ್ ನಿಂದ ಚುಚ್ಚಿ ಕೊಲೆಗೈದಿರುವ ಘಟನೆ ಬೆಳಗಾವಿಯ ಹೊರವಲಯದ ಮಚ್ಚೆ ಬಳಿಯ ಯಳ್ಳೂರು ರಸ್ತೆಯಲ್ಲಿ ನಡೆದಿದೆ.

ಮಜಗಾಂವ್ ಗ್ರಾಮದ ನಿವಾಸಿ ಪ್ರತೀಕ್ ಲೋಹಾರ್ (21) ಮೃತ ಯುವಕ. ಪ್ರತೀಕ್ ಸ್ನೇಹಿತರೊಂದಿಗೆ ಕೆಲ ಯುವಕರು ಜಗಳ ಮಾಡುತ್ತಿದ್ದರು. ಈ ವೇಳೆ ಪ್ರತೀಕ್ ಜಗಳ ಬಿಡಿಸಲೆಂದು ಹೋಗಿದ್ದಾನೆ. ಈ ವೇಳೆ ದುಷ್ಕರ್ಮಿಗಳು ಬೈಕ್ ನಲ್ಲಿದ್ದ ಸ್ಕ್ರೂಡ್ರೈವರ್ ನಿಂದ ಪ್ರತೀಕ್ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ.

ಈ ಹಿಂದೆಯೂ ಇದೇ ಗ್ಯಾಂಗ್ ಪ್ರತೀಕ್ ಜೊತೆ ಜಗಳ ಮಾಡಿತ್ತು ಎನ್ನಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button