Karnataka NewsLatest

ಬೆಳಗಾವಿ ಲೋಕಸಭಾ ಉಪಚುನಾವಣೆ: ಕಣದಲ್ಲಿ 10 ಅಭ್ಯರ್ಥಿಗಳು

8 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್:  ಡಾ. ಕೆ.ಹರೀಶ್ ಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಒಟ್ಟು ೧೮ ಅಭ್ಯರ್ಥಿಗಳ ಪೈಕಿ ೮ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ಶನಿವಾರ (ಏ.೩) ಶಿವಸೇನೆ ಹಾಗೂ ಸರ್ವ ಜನತಾ ಪಾರ್ಟಿಯ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೮ ಜನರು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಂಡರು.

ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ:
ಅಶೋಕ್ ಪಾಂಡಪ್ಪ ಹಣಜಿ(ಸರ್ವ ಜನತಾ ಪಾರ್ಟಿ), ಕೃಷ್ಣಾಜಿ ಪುಂಡಲೀಕ ಪಾಟೀಲ(ಶಿವಸೇನಾ), ಹನುಮಂತ ನಾಗನೂರ ಶಿವಪ್ಪ, ಬಸವರಾಜ.ದುಂ.ಹುದ್ದಾರ, ಸುರೇಶ ಬಸವಂತಪ್ಪ ಪರಗನ್ನವರ, ಸಂಗಮೇಶ ಚಿಕ್ಕನರಗುಂದ, ಭಾರತಿ ಚಿಕ್ಕನರಗುಂದ, ಗುರುಪುತ್ರ ಕೆಂಪಣ್ಣ ಕುಳ್ಳೂರ (ಎಲ್ಲರೂ ಪಕ್ಷೇತರ ಅಭ್ಯರ್ಥಿಗಳು) ಇವರು ತಮ್ಮ ನಾಮಪತ್ರ ವಾಪಸ್ಸು ತೆಗೆದುಕೊಂಡಿದ್ದಾರೆ.

ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ:
ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ ೧೦ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಮಂಗಲಾ ಸುರೇಶ್ ಅಂಗಡಿ(ಭಾರತೀಯ ಜನತಾ ಪಾರ್ಟಿ), ಸತೀಶ್ ಲಕ್ಷಣರಾವ್ ಜಾರಕಿಹೊಳಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ವಿವೇಕಾನಂದ ಬಾಬು ಘಂಟಿ(ಕರ್ನಾಟಕ ರಾಷ್ಟ್ರಸಮಿತಿ), ಶ್ರೀ ವೆಂಕಟೇಶ್ವರ ಮಹಾ ಸ್ವಾಮೀಜಿ(ಹಿಂದೂಸ್ಥಾನ ಜನತಾ ಪಾರ್ಟಿ), ಮರಲಿಂಗಣ್ಣವರ ಸುರೇಶ್ ಬಸಪ್ಪಾ(ಕರ್ನಾಟಕ ಕಾರ್ಮಿಕರ ಪಕ್ಷ).
ಇನ್ನೂಳಿದಂತೆ ಅಪ್ಪಾಸಾಹೇಬ ಶ್ರೀಪತಿ ಕುರಣೆ, ಗೌತಮ್ ಯಮನಪ್ಪ ಕಾಂಬಳೆ, ನಾಗಪ್ಪ ಕಳಸನ್ನವರ, ಶುಭಂ ವಿಕ್ರಾಂತ ಶೆಳಕೆ, ಶ್ರೀಕಾಂತ ಪಡಸಲಗಿ, (ಎಲ್ಲರೂ ಪಕ್ಷೇತರರು).

ಬೆಳಗಾವಿಯಲ್ಲಿ 18 ಅಭ್ಯರ್ಥಿಗಳು; ಇಲ್ಲಿದೆ ಮಾದರಿ ಮತಪತ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button