Latest

ಮಾನವೀಯ ಮೌಲ್ಯಗಳ ಅಮೂಲ್ಯ ಗ್ರಂಥ ಭಗವದ್ಘೀತೆ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ‘ಮಾನವ ಜನ್ಮ ಪಡೆದಿರುವ ನಾವು ಈ ಜನ್ಮದಲ್ಲಿ ಏನು ಮಾಡಬೇಕೆಂದು ತಿಳಿದುಕೋಳ್ಳುವ ಅವಶ್ಯಕತೆ ಇದ್ದು ,ಈ ಭಗವದ್ಗೀತಾ ಜ್ಞಾನಲೊಕವು ನಮಗೆ ಸರಿಯಾದ ದಾರಿ ತೊರಿಸುತ್ತದೆ. ಯಾವುದೆ ಸಮಸ್ಯೆ ಬಂದಾಗ ಅದನ್ನು ಮುಂದೆ ಇಟ್ಟು ಭಗವದ್ಗೀತೆಯ ಪುಟವನ್ನು ತೆರೆದು ನೊಡಿದರೆ ಅದರ ಪರಿಹಾರ ಸಿಗುತ್ತದೆ. ಇದು ನನ್ನ ವಯಕ್ತಿಕ ಅನುಭವವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ಹುಟ್ಟಿದಾಗ ಇರುವ ಮುಗ್ಧತೆಯನ್ನು ಜೀವನದ ಕೊನೆಯತನಕ ಕಾಪಾಡಿಕೊಂಡು ಹೋಗುವುದು ಅತ್ಯವಶ್ಯವಾಗಿದ್ದು, ಮಾನವಿಯ ಮೌಲ್ಯಗಳ ಅಮೂಲ್ಯ ಗ್ರಂಥ ಭಗವದ್ಘೀತೆ’ ಎಂದು ಪ್ರತಿಪಾದಿಸಿದರು. ಅವರು ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಭಗವದ್ಗೀತಾ ಜ್ಞಾನಲೋಕ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 15000 ಜನರನ್ನು ಉದ್ದೆಶಿಸಿ ಮಾತನಾಡಿದರು.

‘ಭಗವದ್ಘೀತೆ ಭಾರತಿಯ ಸಂಸ್ಕೃತಿಯ ಮೂಲವಾಗಿದ್ದು, ಇದು ಯಾವುದೆ ಧರ್ಮಗಳಿಗೆ ಒಬ್ಬ ಅರ್ಜುನನಿಗೆ ಸಿಮಿತವಲ್ಲದೆ, ಸರ್ವರಿಗೂ ಅನ್ವಯವಾಗುತ್ತದೆ. ಧರ್ಮ ಜೀವನ ಸಾಗುವ ಪದ್ಧತಿಯಾಗಿದೆ. ಹದಿನೇಂಟು ಪುರಾಣಗಳ ಸಾರವಾಗಿ ಮಹರ್ಷಿ ವ್ಯಾಸರು ‘ಪರೊಪಕಾರ: ಪುಣ್ಯಾಯ, ಪಾಪಾಯ ಪರಪಿಡನಮ್’ ಎಂದರೆ ಉಪಕಾರದಿಂದ ಪುಣ್ಯ ಮತ್ತು ದುಖ ಕೊಟ್ಟರೆ ಪಾಪವಾಗುತ್ತದೆ ಎಂದು.’ ವ್ಯವಹಾರ ಕಲ್ಲಿದ್ದಲು ಹಾಗೂ ಗಣಿ ಇಲಾಖೆಯ ಸಚಿವರಾದ ಪ್ರಹ್ಲಾದ ಜೋಷಿ ಅವರು ಭಗವದ್ಗೀತೆಯನ್ನು ಸವಿಸ್ತಾರವಾಗಿ ವಿವರಿಸಿದರು.

ಸಂಸ್ಥೆಯ ಅಡಿಷನಲ್ ಸೆಕ್ರೆಟರಿ ಜನರಲ್, ರಾಜಯೋಗಿ ಬೃಜಮೋಹನ ಭಾಯಿಜಿ ಅವರು ‘ಭಾರತ ದೇವಭೂಮಿಯಾಗಿತ್ತು, ಇಂದು ಇದು ನರಕವಾಗಿದೆ. ಭಗವಂತನು ಈ ಸಮುಯದಲ್ಲಿ ಗೀತಾಜ್ಞಾನವನ್ನು ನೀಡಿ ಪುನ: ಸ್ವರ್ಗ ಸ್ಥಾಪನೆ ಮಾಡುತ್ತಿದ್ದು, ಆಕಾರ್ಯದಲ್ಲಿ ಈ ಜ್ಙಾನಲೋಕ ಅದ್ಭುತ ಕಟ್ಟಡ ಅತ್ಯಂತ ಪರಿಣಾಮಕಾರಿಯಾಗಲಿದೆ’ ಎಂದು ಹೇಳಿದರು. ಬೆಂಗಳುರು ಐ.ಟಿ ಹಬ್ಬ್ ವಾಗಿದ್ದರೆ, ಹುಬ್ಬಳ್ಳಿ ಗೀತಾಜ್ಞಾನದ ಹಬ್ಬ್ ವಾಗಿದೆ ಎಂದು ಬಣ್ಣಸಿದರು. ಬ್ರ.ಕು. ಬಸವರಾಜ ರಾಜರುಷಿ ಅವರು ಮಾಡಿದ ಅದ್ಭುತ ಕಾರ್ಯಕ್ಕಾಗಿ ಕೃತಜ್ಞತೆಯನ್ನು ಅರ್ಪಸಿದರು.

Home add -Advt

ಬ್ರಹ್ಮಾಕುಮಾರಿ ಸಂಸ್ಥೆಯ ಜಂಟಿ ಅಧಿಕಾರಿಣಿ ರಾಜಯೋಗಿನಿ ಸಂತೋಷ ಅವರು ಕರ್ಮ ಮತ್ತು ಕರ್ಮದ ಫಲದ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತ ‘ನೂತನ ಕಟ್ಟಡವು ಇಡಿ ವಿಶ್ವಕ್ಕೆ ಆಕರ್ಷಣ ಕೇಂದ್ರವಾಗಲಿದೆ. ಭಗವಂತ ನೀಡುವ ಗೀತಾಜ್ಞಾನ ಸರ್ವರಿಗೂ ತಲಪಿಸುವ ಸಮಯ ಹತ್ತಿರ ಬಂದಿದೆ’ ಎಂದು ಹೇಳಿದರು. ಯಾರು ಬೇರೆಯವರ ಒಳಿತು ಮಾಡುತ್ತಾರೆ ಅವರು ಸದಾ ಸಂತೊಷವಾಗಿ ಇರುತ್ತಾರೆಂದು ನುಡಿದರು.

‘ಜನ್ಮ ಕೊಟ್ಟ ತಂದೆಯ ಜೋತೆಗೆ ಇನ್ನೋಬ್ಬ ತಂದೆ ಇದ್ದಾರೆ, ಅವರೆ ನಿರಾಕಾರ, ಅಯೋನಿಜ, ಅಭೋಕ್ತ, ಅವ್ಯಕ್ತ, ಅಜನ್ಮ, ಅಹಿಂಸಕ, ಅವಿನಾಶಿ ಸರ್ವ ಆತ್ಮಜ್ಯೋತಿಗಳಿಗೂ ಪರಂಜ್ಯೋತಿ ಪರಮಾತ್ಮ. ಅವನ ಜೊತೆ ಸಂಬಂಧ ಜೊಡಿಸಿದಾಗ ಸುಖ ಶಾಂತಿ ಸಮೃದ್ಧಿಯ ಪ್ರಾಪ್ತಿ ಖಚಿತವೆಂದು’ ರಾಜಯೋಗಿ ಕರೂಣಾ, ಚೀಫ ಆಫ್ ಮಲ್ಟಿ ಮೀಡಿಯಾ ಅವರು ಶುಭ ಕೊರಿದರು.

ಕಾರ್ಯಕ್ರಮದ ಆರಂಭದಲ್ಲಿ ಹಗಲುರಾತ್ರಿ ಅತ್ಯಂತ ಪರಶ್ರಮ ಮಾಡಿರುವ ಬಸವರಾಜ ರಾಜಋಷಿ, ನಿದೇಶಕರು ಹುಬ್ಬಳ್ಳಿ ವಲಯ ಅವರು ಪ್ರಸ್ತಾವನಾ ಭಾಷಣ ಮಾಡುತ್ತ ‘ 114 ಮಂಟಪಗಳಲ್ಲಿ ವಿಸ್ತಾರವಾಗಿ ಹರಡಿರುವ ಭಗವ್‌ದ್ಗಿತೆಯ ಜ್ಞಾನಲೋಕದ ಬಗ್ಗೆ ವಿವರಣೆ ನಿಡಿದರು. ಇದು ಅವರ 13 ವರ್ಷದ ಅವಿಶ್ರಾಂತ ಸೇವೆಯ ಪ್ರತಿಫಲವಾಗಿದೆ. ಇಂದಿನ ಕಲಿಷಿತ ಮನೋಭಾವದ ಮಾನವನಿಗೆ ಬಗವದ್ಗೀತೆ ಯಂಬ ನಿಷ್ಕಲ್ಮಶ ಅಮೃತಸಿಂಚನ ಮಾಡಿದುವ ಕಿರುಪ್ರಯತ್ನವೇ ಈ ಜ್ಞಾನಲೋಕವೆಂಬ ಅದ್ಭುತ ವಿಸ್ಮಯ ಲೋಕದರ್ಶನವೆಂದು ಹೇಳಿದರು.

ಶ್ರೀ ಹಾಲಪ್ಪ ಆಚಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶ್ರೀ. ಶಂಕರ ಬಿ.ಪಾಟೀಲ ಮೂನೇನಕೊಪ್ಪ, ಜವಳಿ ಮತ್ತು ಸಕ್ಕರೆ ಇಲಾಖೆ, ಶ್ರೀ. ಬಿ.ವೈ. ರಾಘವೇಂದ್ರ ಲೋಕಸಭಾ ಸದಸ್ಯರು, ಶ್ರೀ.ಸೋಮಶೇಖರ ರೆಡ್ಡಿ, ಶಾಸಕರು, ಬಳ್ಳಾರಿ, ಶ್ರೀ. ಅರವಿಂದ ಬೆಲ್ಲದ, ಶಾಸಕರು,ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತದ್ದರು.

ಬ್ರಹ್ಮಾಕುಮಾರಿ ಸಂಸ್ಥೆಯ ಪ್ರಮುಖರಾದ ಬ್ರ.ಕು.ಚಕ್ರಧಾರಿ ದೀದಿ ದೆಹಲಿ, ಬ್ರ.ಕು.ಶುಕ್ಲಾ ದೀದೀ ದೆಹಲಿ, ಬ್ರ.ಕು.ಶಾರದಾ ದೀದೀ, ಅಹಮದಾಬಾದ್, ಬ್ರ.ಕು.ಸೋಮ್ ದೀದೀ ಉಲ್ಲಾಸನಗರ, ಬ್ರ.ಕು.ಪುಷ್ಪಾ ಬೆಹೆನಜಿ ದೆಹಲಿ, ಬ್ರ.ಕು.ಶಕ್ತಿ ಬೆಹೆನಜಿ ದೆಹಲಿ, ಬ್ರ.ಕು.ಲಕ್ಷ್ಮೀ ಬೆಹೆನಜಿ ಮೈಸುರು, ಬ್ರ.ಕು.ಸರೋಜಾ ಬೆಹೆನಜಿ ಬೆಂಗಳೂರು, ಬ್ರ.ಕು.ವಿಜಯಾ ಬೆಹೆನಜಿ ಗುಲ್ಬರ್ಗಾ, ಬ್ರ.ಕು.ಪ್ರೇಮ್ ಭಾಯಿಜಿ ಗುಲ್ಬರ್ಗಾ, ಬ್ರ.ಕು.ಅಂಬಿಕಾ ಬೆಹೆನಜಿ ಬೆಳಗಾವಿ, ಬ್ರ.ಕು.ಸೋಮಪ್ರಭಾ ಬೆಹೆನಜಿ ಸೋಲಾಪುರ, ಬ್ರ.ಕು. ರಾಧಾ ಬೆಹೆನಜಿ ಲಖನೌ, ಬ್ರ.ಕು.ವಿಜಯಾ ಬೆಹೆನಜಿ ಡುಂಗರಪುರ, ಬ್ರ.ಕು.ಅಲಕಾ ಬೆಹೆನಜಿ ಕಲ್ಯಾಣ, ಬ್ರ.ಕು.ಕುಸುಮಾ ಬೆಹೆನಜಿ ಕಲ್ಯಾಣ, ಮುಂತಾದವರು ಶುಭಕೊರಿದರು.

ಶಿಕ್ಷಣ ವಿಭಾಗದ ಉಪಾಧ್ಯಕ್ಷರಾದ ರಾಜಯೋಗಿ ಮೃತ್ಯುಂಜಯ ಅವರು ಶುಭಾಶಯವನ್ನು ನಿಡುತ್ತ, ಸರ್ವರಿಗೂ ವಂದನೆಗಳನ್ನು ಅರ್ಪಿಸಿದರು. ಕಾರ್ಯಕ್ರಮದ ನೀರುಪಣೆ ಬ್ರ.ಕು. ವಿಣಾಜಿ ಅವರುಮಾಡಿದರೆ, ಸ್ವಾಗತವು ರಾಜಯೋಗಿನಿ ನಿರ್ಮಲಾಜಿ ಸಂಚಾಲಕಿ ಹುಬ್ಬಳ್ಳಿ ಉಪವಲಯ ಅವರು ಮಡಿದರು. ಪರಿಸರ ಮಾಲಿನ್ಯದ ತಡೆಗಾಗಿ ತುಳಸಿ ಗೀಡಗಳಿಗೆ ನೀರು ಹಾಕುವ ಮೂಲಕ ಮತ್ತು ತಿರಂಗಿ ಬಣ್ಣದ ಬಲೂನ ಆಕಾಶಕ್ಕೆ ಬಿಡುವ ಮುಲಕ ಉದ್ಘಾಟನೆ ಆಯಿತು. ಸ್ವಾಗತ ನೃತ್ಯ ಶಿವರಂಜನಿ ಕಲಾವಿದರಿಂದ ಆಯಿತು.

ಅತಿಸುಂದರ ವಿದ್ಯುತ ಅಲಂಕಾರ ದಿಂದ ಸಭಾಂಗಣವು ಆಕರ್ಷಣೆಮಯವಾಗಿತ್ತು.

Related Articles

Back to top button