Kannada NewsKarnataka NewsNationalPolitics
*ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ನೇಮಕ*

ಪ್ರಗತಿವಾಹಿನಿ ಸುದ್ದಿ: ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಅವಧಿ ಮೇ 14ರಂದು ಮುಕ್ತಾಯವಾಗಲಿದ್ದು, ನಂತರ ನ್ಯಾಯಮೂರ್ತಿ ಗವಾಯಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಸಂಬಂಧ, ನ್ಯಾ. ಗವಾಯಿ ಅವರ ಹೆಸರನ್ನು ಏಪ್ರಿಲ್ 16ರಂದು ನ್ಯಾ. ಖನ್ನಾ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಗವಾಯಿ ಅವರ ಅಧಿಕಾರಾವಧಿ ಆರು ತಿಂಗಳುಗಳವರೆಗೆ ಇರಲಿದ್ದು, ನವೆಂಬರ್ನಲ್ಲಿ ಅವರಿಗೆ 65 ವರ್ಷ ಪೂರ್ತಿಯಾಗುವ ಕಾರಣ ಅಂದು ಅವರು ನಿವ.ತಿ ಹೊಂದಲಿದಾರೆ.