Latest

ನಾಳೆ, ನಾಡಿದ್ದು ಕೇಂದ್ರ ಸಚಿವ ಸಂಪುಟ ಕರ್ನಾಟಕದಲ್ಲಿ!

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಸಚಿವಸಂಪುಟದ ಎಲ್ಲ ಸಚಿವರು ಏ.25 ಹಾಗೂ 26ರಂದು ಕರ್ನಾಟಕದಲ್ಲಿರಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಸಚಿವರು 2 ದಿನ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನ ಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಬಹುಮತ ಪಡೆಯಲೇ ಬೆಂಕೆಂದು ಕೇಂದ್ರ ಸಚಿವಸಂಪುಟದ ಎಲ್ಲ ಸದಸ್ಯರನ್ನೂ ಬಳಸಿಕೊಳ್ಳುತ್ತಿದೆ.

ಮೇ 3ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ಕರ್ನಾಟಕಕ್ಕೆ ಬರಲಿದ್ದಾರೆ. ಆ ದಿನ ವಿವಿಧೆಡೆ ರ್ಯಾಲಿಗಳಲ್ಲಿ ಅವರು ಪಾಲ್ಗೊಳ್ಳುವರು. ಅಂದು ಬೆಳಗಾವಿಗೂ ಅವರು ಬರಲಿದ್ದಾರೆ.

https://pragati.taskdun.com/union-minister-smriti-irani-and-annapurnadevi-for-a-25-campaign-meeting/
https://pragati.taskdun.com/conspiracy-to-finish-lingayat-leaders-within-bjp-siddaramaiah/

Home add -Advt

Related Articles

Back to top button