Kannada NewsLatest

ಮತ್ತೆ ಕಟ್ಟಿ ನಿಲ್ಲಿಸುತ್ತೇನೆ -ಲಕ್ಷ್ಮಿ ಹೆಬ್ಬಾಳಕರ್

ಮತ್ತೆ ಕಟ್ಟಿ ನಿಲ್ಲಿಸುತ್ತೇನೆ -ಲಕ್ಷ್ಮಿ ಹೆಬ್ಬಾಳಕರ್

ಸಂತ್ರಸ್ತರಿಗೆ ರಗ್ಗು, ಔಷಧಗಳ ವಿತರಣೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಕೂಡ ಇಡೀ ದಿನ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ರಗ್ಗು, ಔಷಧಗಳನ್ನು ವಿತರಿಸಿದರು.

ಕಂಗ್ರಾಳಿ ಕೆಎಚ್, ರಾಜಾನಗರ, ಸಿದ್ದೇಶ್ವರ ನಗರ, ಅಂಬೇವಾಡಿ, ಮಣ್ಣೂರು, ಗೋಜಗಾ, ಕೆಕೆ ಕೊಪ್ಪ, ಹಾಲಗಿಮರಡಿ, ಹುಲಿಕವಿ ಮೊದಲಾದ ಗ್ರಾಮಗಳಿಗೆ ಹೆಬ್ಬಾಳಕರ್ ಭೇಟಿ ನೀಡಿದರು. ಸಂತ್ರಸ್ತರು ಶಾಸಕರ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಎಲ್ಲರ ಅಹವಾಲು, ನೋವುಗಳನ್ನು ಆಲಿಸಿದ ಶಾಸಕಿ, ಎಲ್ಲ ಸಂತ್ರಸ್ತರಿಗೂ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

ಸಂತ್ರಸ್ತರಿಗೆ ರಗ್ಗುಗಳನ್ನು, ಅತೀ ಅವಶ್ಯಕ ಔಷಧಗಳನ್ನು ಲಕ್ಷ್ಮಿ ಹೆಬ್ಬಾಳಕರ ವಿತರಿಸಿದರು.  ಮುಂದಿನ ದಿನಗಳಲ್ಲಿ ಸರಕಾರದ ನೆರವಿನಿಂದ ಎಲ್ಲ ರೀತಿಯ ಪರಿಹಾರ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಗೋಜಗಾದಲ್ಲಿ ಶಾಲೆ ಕಟ್ಟಡ ಬಿದ್ದಿದ್ದು, ಅದನ್ನೂ ಪರಿಶೀಲಿಸಿದರು.

ಚನ್ನರಾಜ ಹಟ್ಟಿಹೊಳಿ ಮತ್ತು ಮೃಣಾಲ್ ಹೆಬ್ಬಾಳಕರ್ ಸಹ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಸಂತ್ರಸ್ತರನ್ನು ಸಂತೈಸಿದರು.

ಮತ್ತೆ ಕಟ್ಟಿ ನಿಲ್ಲಿಸುತ್ತೇನೆ

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾದ ಕಳೆದ ಒಂದೇ ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದರು. ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದರು. ಶಾಲೆಗಳನ್ನು ದುರಸ್ತಿ ಮಾಡಿಸಿದ್ದರು. ಶಾಲೆಗಳ ಕಂಪೌಂಡ್ ನಿರ್ಮಿಸಿದ್ದರು. ಗಟಾರಗಳನ್ನು ನಿರ್ಮಿಸಿದ್ದರು. ಆದರೆ ಬಹುತೇಕ ಕಾಮಗಾರಿಗಳು ಮಹಾಮಳೆಯಿಂದ ಹಾಳಾಗಿವೆ.

50 ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಗದ ಅಭಿವೃದ್ಧಿಯನ್ನು ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದೆ. ಆದರೆ ನಿಸರ್ಗದ ಮುಂದೆ ನಾವೆಲ್ಲ ಸಣ್ಣವರು. ಆದಾಗ್ಯೂ ನಾನು ಕಂಗೆಡುವುದಿಲ್ಲ. ಮತ್ತೆ ಗ್ರಾಮಗಳನ್ನು ಕಟ್ಟಿ ನಿಲ್ಲಿಸುತ್ತೇನೆ. ಯಾರೂ ಎದೆಗುಂದುವುದು ಬೇಡ. ಸರಕಾರ ನನ್ನೊಂದಿಗೆ ಸಹಕರಿಸಬೇಕು. ಯಾವುದೇ ಪಕ್ಷಪಾತ ಮಾಡದೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button