Latest

ವಿದ್ಯಾರ್ಥಿನಿ ಮೇಲೆಯೇ ಹರಿದ ಬಸ್; ಬಾಲಕಿ ದುರ್ಮರಣ; ಇಬ್ಬರ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಎಂಟಿಸಿ ಬಸ್ ಗೆ ಮತ್ತೋರ್ವ ವಿದ್ಯಾರ್ಥಿನಿ ಬಲಿಯಾಗಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

15 ವರ್ಷದ ವಿದ್ಯಾರ್ಥಿನಿ ಲಾವ್ಯಾಶ್ರೀ ಮೃತ ಬಾಲಕಿ. ಲಾವ್ಯಾಶ್ರೀ ತನ್ನ ತಾಯಿ ಹಾಗೂ ಸಹೋದರನ ಜೊತೆ ಶಾಲೆಯಿಂದ ಬರುತ್ತಿದ್ದಾಗ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಲಾವ್ಯಾಶ್ರೀ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಲಾವ್ಯಾಶ್ರೀ ತಾಯಿ ಪ್ರಿಯದರ್ಶಿನಿ ಹಾಗೂ ಸಹೋದರ ಯಾಶ್ವಿನ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಪ್ರಿಯದರ್ಶಿನಿ ತಮ್ಮ ಮಕ್ಕಳಾದ ಲಾವ್ಯಾಶ್ರೀ ಹಾಗೂ ಯಾಶ್ವಿನ್ ನನ್ನು ಶಾಲೆಯಿಂದ ಬೈಕ್ ನಲ್ಲಿ ಕರೆತರುತ್ತಿದ್ದರು. ಈ ವೇಳೆ ಬಟ್ಟರಹಳ್ಳಿ ಸರ್ಕಲ್ ಬಳಿ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿಹೊಡೆದಿದ್ದು, ಮೂವರು ಕೆಳಗೆ ಬಿದ್ದಿದ್ದಾರೆ. ಬೈಕ್ ಬಲಭಾಗಕ್ಕೆ ಬಿದ್ದ ಲಾವ್ಯಾಶ್ರೀ ಮೇಲೆಯೇ ಬಸ್ ಹರಿದಿದೆ. ಮೂವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಲಾವ್ಯಾಶ್ರೀ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಬಸ್ ಚಾಲಕನನ್ನು ಕೆ ಆರ್ ಪುರಂ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ ಎಸ್ಕಾರ್ಟ್ ವಾಹನ ಪಲ್ಟಿ; ತಾಯಿ-ಮಗು ಗಂಭೀರ

https://pragati.taskdun.com/cm-basavaraj-bommaiescort-vehicleaccidenthiriyuruchitradurga/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button