Kannada NewsKarnataka NewsLatest

ಹಾವು ಕಚ್ಚಿ ಬಾಲಕ ಸಾವು

ಬೆಳಗಾವಿ: ತಾಲೂಕಿನ ಬೆಂಡಿಗೇರಿ ಗ್ರಾಮದ ಪುಟ್ಟ ಬಾಲಕ ಹಾವು ಕಡಿತಕ್ಕೆ ಬಲಿಯಾಗಿದ್ದಾನೆ.

ಹರ್ಷ (ಹಣಮಂತ) ಸೋಮಪ್ಪ ನಾಯ್ಕರ (10) ಮೃತಪಟ್ಟವ. ಈತ ಬೆಂಡಿಗೇರಿಯ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿಯಾಗಿದ್ದು ಮನೆ ಹತ್ತಿರ ಶುಕ್ರವಾರ ಆಟ ಆಡುವಾಗ ಹುಲ್ಲು ಪೊದೆಯಲ್ಲಿ ಬಿದ್ದ ಚೆಂಡು ತರಲು ಹೋದಾಗ ಹಾವು ಕಚ್ಚಿದೆ.

ತಕ್ಷಣ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೆಳಗಾವಿ ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಈ ವೇಳೆಗಾಗಲೇ ತೀವ್ರ ಗಂಭೀರ ಸ್ಥಿತಿ ತಲುಪಿದ್ದ ಬಾಲಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೊನೆಯುಸಿರೆಳೆದಿದ್ದಾನೆ.

Home add -Advt

ಬಾಲಕನ ಸಾವಿನ ಹಿನ್ನೆಲೆಯಲ್ಲಿ ಆತ ಓದುತ್ತಿದ್ದ ಶಾಲೆಗೆ ಒಂದು ದಿನದ ರಜೆ ಘೋಷಿಸಲಾಗಿದೆ.

ಗೋವಾದ ಹೋಟೆಲ್‌ನಲ್ಲಿ ರಷ್ಯಾದ ಮಹಿಳೆಯ ಮೇಲೆ ಅತ್ಯಾಚಾರ: ಇಬ್ಬರು ನೇಪಾಳಿ ಪ್ರಜೆಗಳ  ಬಂಧನ

Related Articles

Back to top button