Belagavi NewsBelgaum NewsKannada NewsKarnataka NewsPolitics
*ಅಭಿವೃದ್ಧಿ ಕೇಂದ್ರಿತ ಬಜೆಟ್: ಡಾ.ಸೋನಾಲಿ ಸರ್ನೋಬತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಬಜೆಟ್ 2026, ಅಭಿವೃದ್ಧಿ ಕೇಂದ್ರಿತ ಮತ್ತು ಭವಿಷ್ಯನಿರ್ದೇಶಿತವಾಗಿದೆ ಎಂದು ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ ತಿಳಿಸಿದ್ದಾರೆ.
ಇಂದು ಮಂಡನೆಯಾದ ಕೇಂದ್ರ ಬಜೇಟ್ ಬಗ್ಗೆ ಪ್ರಕಟಣೆ ಹೋರಡಿಸಿರುವ ಅವರು, ಮೂಲಸೌಕರ್ಯ ಕ್ಷೇತ್ರದಲ್ಲಿ ದಾಖಲೆ ಹೂಡಿಕೆ, ಉತ್ಪಾದನಾ ವಲಯಕ್ಕೆ ಉತ್ತೇಜನ ಮತ್ತು ಆರ್ಥಿಕ ಶಿಸ್ತಿಗೆ ಆಧ್ಯತೆ ನೀಡಲಾಗಿದೆ. ಇವೆಲ್ಲವೂ ವಿಕಸಿತ ಭಾರತ ನಿರ್ಮಾಣದ ಮೋದಿ ಸರ್ಕಾರದ ದೃಢ ಸಂಕಲ್ಪವನ್ನು ತೋರಿಸುತ್ತವೆ. ಇದು ತಾತ್ಕಾಲಿಕ ಲಾಭಕ್ಕಾಗಿ ಅಲ್ಲ, ದೀರ್ಘಕಾಲಿನ ರಾಷ್ಟ್ರ ನಿರ್ಮಾಣಕ್ಕಾಗಿ ರೂಪಿಸಿದ ಬಜೆಟ್ ಎಂದಿದ್ದಾರೆ.


