
ಹಠಾತ್ ಪ್ರತಿಭಟನೆಗಿಳಿದ ಪ್ರಯಾಣಿಕರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪ್ರತಿದಿನ ರಾತ್ರಿ ಬೈಲಹೊಂಗಲಕ್ಕೆ ಬಸ್ ಬಿಡಲು ವಿಳಂಬ ಮಾಡುವ ಧೋರಣೆ ಖಂಡಿಸಿ ಇಂದು ರಾತ್ರಿ ಪ್ರಯಾಣಿಕರು ಹಠಾತ್ ಪ್ರತಿಭಟನೆಗಿಳಿದರು.
ಕಳೆದ ಹಲವು ದಿನಗಳಿಂದ ತಾಳ್ಮೆಯಿಂದ ಸಹಿಸಿಕೊಂಡಿದ್ದ ಪ್ರಯಾಣಿಕರು ಇಂದು ಆಕ್ರೋಶಭರಿತರಾಗಿದ್ದರು. ರಾತ್ರಿ 7 ಗಂಟೆಯ ನಂತರ ಬೈಲಹೊಂಗಲಕ್ಕೆ ಬಸ್ ಬಿಡುತ್ತಿಲ್ಲ. ಮತ್ತೆ ಬಸ್ ಬಿಡುವುದು 9.30ರ ನಂತರವೇ. ಉದ್ದೇಶಪೂರ್ವಕವಾಗಿಯೇ ಈ ರೀತಿಯ ಧೋರಣೆ ಅನುಸರಿಸಲಾಗುತ್ತಿದೆ ಎನ್ನುವುದು ಪ್ರಯಾಣಿಕರ ಅಸಮಾಧಾನ.

ಬಸ್ ನಿಲ್ದಾಣದಿಂದ ಯಾವುದೇ ಬಸ್ ಹೊರಗೆ ಹೋಗದಂತೆ ಪ್ರಯಾಣಿಕರು ತಡೆದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ನಂತರ ಬಸ್ ವ್ಯವಸ್ಥೆ ಮಾಡಿದರು.