Kannada NewsKarnataka NewsLatest

ವಿಧಾನ ಪರಿಷತ್ ನಲ್ಲಿ ನೇಕಾರರ ಸಮಸ್ಯೆ ತೆರೆದಿಟ್ಟ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಭಾಗದ ಪ್ರಮುಖ ಉದ್ಯಮವಾದ ನೇಕಾರಿಕೆಯಲ್ಲಿ ತೊಡಗಿಕೊಂಡವರ ಹಲವು ಸಂಕಷ್ಟಗಳ ಬಗ್ಗೆ ವಿಧಾನ ಪರಿಷತ್ ನಲ್ಲಿ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬುಧವಾರ ಗಮನ ಸೆಳೆದರು.

ರಾಜ್ಯದಲ್ಲಿ ಸುಮಾರು 54,250 ಕೈಮಗ್ಗ ನೇಕಾರರು ಹಾಗೂ 97,133 ವಿದ್ಯುತ್ ಮಗ್ಗ ನೇಕಾರರಿದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ 22,524 ವಿದ್ಯುತ್ ಮಗ್ಗ ನೇಕಾರರು ಹಾಗೂ 5353 ಕೈಮಗ್ಗ ನೇಕಾರರಿದ್ದಾರೆ. ಸರಕಾರ 1.25 ರೂ. ದರದಲ್ಲಿ ವಿದ್ಯುತ್ ಸಬ್ಸಿಡಿ ಯೋಜನೆ ನೀಡಿರುವುದಾಗಿ ಸರಕಾರ ಹೇಳಿಕೊಂಡಿದೆ.

ಆದರೆ ಜಿಎಸ್ ಟಿ, ಎಫ್ ಐ ಇತ್ಯಾದಿ ಸೇರಿ ಪ್ರತಿ ಯುನಿಟ್ ಗೆ 3.25 ಪೈಸೆ ಆಗುತ್ತಿದೆ. ಹೀಗಾಗಿ ಎಲ್ಲವನ್ನೂ ಸೇರಿಸಿ 1.25 ರೂ. ದರದಲ್ಲಿ ವಿದ್ಯುತ್ ಒದಗಿಸಲು ಸರಕಾರ ಕ್ರಮ ವಹಿಸಬೇಕು ಎಂದು ಚನ್ನರಾಜ ಹಟ್ಟಿಹೊಳಿ ಆಗ್ರಹಿಸಿದರು.

ಕೋವಿಡ್ ಸಂದರ್ಭದಲ್ಲಿ ನೇಕಾರರು ಸಾಕಷ್ಟು ಸಂಕಷ್ಟಪಟ್ಟಿದ್ದಾರೆ. ಈ ವೇಳೆ ಸರಕಾರ ಅವರಿಗೆ ಶೇ.3 ಬಡ್ಡಿದರದ ಸಾಲ ನೀಡಿರುವುದಾಗಿ ಸರಕಾರ ತಿಳಿಸಿದೆ. ಆದರೆ ಕೆಲ ನೇಕಾರರು ತಮ್ಮಲ್ಲಿ ಹೇಳಿಕೊಂಡ ಪ್ರಕಾರ ಕಳೆದ ನಾಲ್ಕು ವರ್ಷಗಳಿಂದ ಶೇ.3 ಬಡ್ಡಿದರದ ಸಾಲ ಯೋಜನೆ ನೇಕಾರರಿಗೆ ತಲುಪಿಲ್ಲ. ಅವರು ಈ ಹಿಂದೆ ಪಡೆದ ಶೇ.13 ಹಾಗೂ 14 ದರದಲ್ಲೇ ಸಾಲದ ಕಂತು ಕಟ್ಟುತ್ತಿದ್ದಾರೆ. ಸರಕಾರ ಈ ಕುರಿತು ಕ್ಷಿಪ್ರ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ಇದಕ್ಕೆ ಉತ್ತರಿಸಿದ ಜವಳಿ ಹಾಗೂ ಕೈಮಗ್ಗ ಸಚಿವರು, ತಮಿಳುನಾಡು ಮಾದರಿಯಲ್ಲಿ ತಮಗೆ ಪ್ಯಾಕೇಜ್ ನೀಡಬೇಕೆಂಬುದು ನೇಕಾರರ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.17ರಂದು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಭೆ ಸೇರಿ ನೇಕಾರರ ಶೇ. 99 ರಷ್ಟು ಬೇಡಿಕೆಗಳನ್ನು ಈಡೇರಿಸಿ ಸರಕಾರಿ ಆದೇಶ ಹೊರಡಿಸಲಾಗಿದ್ದು ಇನ್ನಷ್ಟು ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುತ್ತಿದೆ ಎಂದರು.

*ಭೀಕರ ಅಪಘಾತ; ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ*

https://pragati.taskdun.com/accidentstudent-deathtwo-injuerdshivamogga/

ಬೆಳಗಾವಿ ಭಾಗದ ಅಭಿವೃದ್ಧಿಗೆ ಕ್ರಮ ವಹಿಸಿ; ಸಿಎಂಗೆ ಚನ್ನರಾಜ ಹಟ್ಟಿಹೊಳಿ ನೇತೃತ್ವದ ನಿಯೋಗದ ಮನವಿ

https://pragati.taskdun.com/take-action-for-the-development-of-belgaum-part-channaraja-hattiholi-led-delegation-appeal-to-cm/

*ಗಡಿ ವಿವಾದ: ಸಿಎಂಗೆ ಡಿ.ಕೆ ಶಿವಕುಮಾರ್‌ ಸವಾಲು*

https://pragati.taskdun.com/d-k-shivakumarcm-basavaraj-bommaikarnataka-maharashtra-border-issue/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button