CrimeHealthKannada NewsLatestNational
*ಕೆಮ್ಮಿನ ಸಿರಪ್ ನಿಂದ ಮಕ್ಕಳ ಸಾವು ಪ್ರಕರಣ: ಔಷಧಿ ಕಂಪನಿ ಮಾಲೀಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಕೇಸ್ ನಲ್ಲಿ ಚೆನ್ನೈನಲ್ಲಿ ಕೆಮ್ಮಿನ ಸಿರಪ್ ಕಂಪನಿಯ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.
ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940 ರ ಸೆಕ್ಷನ್ 17 A ಉಲ್ಲಂಘನೆಗಾಗಿ ಔಷಧಿ ಕಂಪನಿ ಮಾಲೀಕನ ಬಂಧನವಾಗಿದೆ.
ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಈವರೆಗೂ 20 ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯೋಪ್ರವೃತ್ತರಾದ ಪೊಲೀಸರು ಔಷಧಿ ಕಂಪನಿ ಮಾಲೀಕನನ್ನು ಚೆನ್ನೈನಲ್ಲಿ Sresan ಫಾರ್ಮಾಸಿಟಿಕಲ್ಸ್ ನ ಜಿ. ರಂಗನಾಥನ್ ಅವರನ್ನು ಬಂಧಿಸಿದ್ದಾರೆ.
73 ವರ್ಷದ ರಂಗನಾಥ್, ಮದ್ರಾಸ್ ಮೆಡಿಕಲ್ ಕಾಲೇಜಿನ ಪದವೀಧರನಾಗಿದ್ದು, 40ವರ್ಷಗಳಿಂದ ಔಷಧ ಸಂಶೋಧನೆ ವಲಯದಲ್ಲಿ ಹೆಸರುವಾಸಿಯಾಗಿದ್ದಾರೆ. ಮಕ್ಕಳ ಸಿರಪ್ ಸರಬರಾಜು ಮಾಡಿದ್ದ ಕಂಪನಿಯ ಔಷಧಿ ತಯಾರಿಕೆ ಹಿಂದೆ ರಂಗನಾಥ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೊತ್ತಾಗಿದೆ.