LatestNational

*ಮೇಘಸ್ಫೋಟಕ್ಕೆ ಐವರು ಸಾವು: ಹಲವರು ಕಣ್ಮರೆ*

ಪ್ರಗತಿವಾಹಿನಿ ಸುದ್ದಿ: ಮೇಘಸ್ಫೋಟಕ್ಕೆ ದಿಢೀರ್ ಪ್ರವಾಹವುಂಟಾಗಿ ಐವರು ಮೃತಪಟ್ಟಿದ್ದು, ಹಲವರು ಕಣ್ಮರೆಯಾಗಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ.

ಧಾರಾಲಿಖೀರಗರ್ದ್ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಮಣ್ಣು ಮಿಶ್ರಿತ ನೀರು ಪ್ರವಾಹೋಪಾದಿಯಲ್ಲಿ ಹರಿದುಬಂದಿದ್ದು, ನೂರಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಐವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಪ್ರಸಿದ್ಧ ಯಾತ್ರಾಸ್ಥಳ ಗಂಗೋತ್ರಿ ಧಾರಾಲಿಯಿಂದ ಕೇವಲ 18 ಕಿ.ಮೀ ದೂರವಿದ್ದು, ಧಾರಾಲಿ ಈ ಮಾರ್ಗದ ಪ್ರಮುಖ ತಂಗುದಾಣವಾಗಿದೆ. ಇಲ್ಲಿ ಹಲವಾರು ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ, ಮನೆಗಳಿವೆ. ಖೀರಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ ಹಠಾತ್ ಪ್ರವಾಹವುಂಟಾಗಿದೆ.

Home add -Advt

Related Articles

Back to top button