Latest

*ಹಿರಿಯ ಪತ್ರಕರ್ತ ಮದನಮೋಹನ್ ಮತ್ತಿಹಳ್ಳಿ ನಿಧನಕ್ಕೆ ಸಿಎಂ ಕಂಬನಿ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಮದನಮೋಹನ್ ಮತ್ತಿಹಳ್ಳಿ ಅವರ ಅಗಲಿಕೆ ತೀವ್ರ ದು:ಖ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

‘ದಿ ಹಿಂದು’ ಪತ್ರಿಕೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮದನ್ ಮೋಹನ್ ಅವರುಉತ್ತರ ಕರ್ನಾಟಕ ಭಾಗದ ಸಮಸ್ಯೆ-ಸಂಕಷ್ಟಗಳ ಬಗ್ಗೆ ಬರೆಯುತ್ತಿದ್ದ ಕಟು ವಿಮರ್ಶೆಯ ವರದಿ-ಲೇಖನಗಳು ಸರ್ಕಾರಗಳ ಕಣ್ತೆರುಸುವಂತಿದ್ದವು. ಅಂತರರಾಜ್ಯ ಜಲವಿವಾದ ಮತ್ತು ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆ ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಅವರ ವೃತ್ತಿಬದುಕು ಕಿರಿಯರಿಗೆ ಪ್ರೇರಣೆಯಾಗಲಿ ಎಂದು ಹಾರೈಸುವೆ.

ಮದನಮೋಹನ್ ಅವರ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು, ಅವರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button