
ಪ್ರಗತಿವಾಹಿನಿ ಸುದ್ದಿ, ಮುಗಳಖೋಡ : ಸಮೀಪದ ಹಾರೂಗೇರಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮುಗಳಖೋಡ ಪಟ್ಟಣದಲ್ಲಿ ಸ್ವಯಂ ಪ್ರೇರಣೆಯಿಂದ ಗುರುವಾರ ಸಂಜೆ ೫ ಗಂಟೆಯಿಂದ ಬಂದ್ ಮಾಡಲಾಗಿದೆ.
ಹಾರೂಗೇರಿ ಪಟ್ಟಣದ ವಿದ್ಯಾ ನಗರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಬುಧವಾರ ಬರುತ್ತಿದ್ದಂತೆ ಮುಗಳಖೋಡ ಪುರಸಭೆ ಸದಸ್ಯರಾದ ಕೆಂಪಣ್ಣ ಮುಶಿ, ರಮೇಶ ಖೇತಗೌಡರ, ಅಂಗಡಿ ಮಾಲಿಕರ ಸಭೆ ಕರೆದು ಹಾರೂಗೇರಿ – ಮುಗಳಖೋಡ ಅವಳಿ ಪಟ್ಟಣ ೧೨ ಕಿ.ಮೀ. ಅಂತರವಿದ್ದು ಜನ ಸಂಪರ್ಕ ಹೆಚ್ಚಾಗಿರುವುದರಿಂದ ಮುಗಳಖೋಡ ಪಟ್ಟಣದಲ್ಲಿ ಮುಂಜಾಗೃತೆ ಕ್ರಮವಾಗಿ ಸೋಮವಾರದ ವರೆಗೆ ಸಂಜೆ ೫ರಿಂದ ಮುಂಜಾನೆ ೬ ಗಂಟೆಯವರೆಗೆ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸುವಂತೆ ಮನವಿ ಮಾಡಲಾಯಿತು.
ಮನವಿಗೆ ಸ್ಪಂದಿಸಿದ ಅಂಗಡಿ ಮಾಲಿಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೊರೋನಾ ಮಹಾಮಾರಿ ರೋಗದ ವಿರುದ್ದ ಹೋರಾಡಲು ಸಿದ್ದರಾಗಿ ಮಾಸ್ಕ್, ಸ್ಯಾನಿಟೈಜರ ಉಪಯೋಗಿಸುವಂತೆ ಸೂಚಿಸಲಾಯಿತು.