ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಕರೋನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 213ಕ್ಕೆ ಏರಿಕೆ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ.

ಕರೋನಾ ವೈರಸ್​ಗೆ ತುತ್ತಾದ 9,692 ಪ್ರಕರಣ ದಾಖಲಾಗಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ವೈರಸ್​ನ ಆತಂಕ ಹೆಚ್ಚಿರುವುದರಿಂದ ವಿಶ್ವಸಂಸ್ಥೆ ಪ್ರಪಂಚಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ವೈರಸ್​ ಹಬ್ಬುವುದನ್ನು ತಡೆಯುವಂತೆ ಮಾಡಲು ಪ್ರಯತ್ನಿಸಬೇಕು. ಎಲ್ಲರೂ ಒಟ್ಟಾದಾಗ ಮಾತ್ರ ಅದು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಇನ್ನು, ಚೀನಾದಿಂದ ಭಾರತಕ್ಕೆ ಆಗಮಿಸಿದ ಕೇರಳದ ವಿದ್ಯಾರ್ಥಿಯೊಬ್ಬನಿಗೆ ಈ ವೈರಸ್​ ಇರುವುದು ಅಧಿಕೃತವಾಗಿದೆ. ಚೀನಾದ ವುಹಾನ್​ ವಿಶ್ವವಿದ್ಯಾಲಯದಲ್ಲಿ ಈತ ಅಧ್ಯಯನ ನಡೆಸುತ್ತಿದ್ದ. ಜನವರಿ 25 ಚೀನಾಗೆ ಹೊಸ ವರ್ಷ. ಹೀಗಾಗಿ, ರಜೆಯ ಮಜ ಕಳೆಯಲು ವಿಶ್ವದ ನಾನಾ ಭಾಗಕ್ಕೆ ಚೀನಾ ದೇಶದವರು ಪ್ರವಾಸಕ್ಕೆ ತೆರಳುವವರಿದ್ದರು. ಹೀಗಾಗಿ ಪ್ರವಾಸ ಕೈಗೊಳ್ಳುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ವಿಶ್ವಾದ್ಯಂತ ಈ ವೈರಸ್​ ಅಷ್ಟಾಗಿ ಹಬ್ಬುತ್ತಿಲ್ಲ.

ಚೀನಾದ ಕೇಂದ್ರ ಪ್ರದೇಶ ಹುಬೈ ಪ್ರಾಂತ್ಯದಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಈ ಭಾಗಕ್ಕೆ ತೆರಳದಂತೆ ನಿರ್ಬಂಧ ಹೇರಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ತಿಳಿಸಿದೆ.

2002-2003ರಲ್ಲಿ ಸಾರ್ಸ್​ ಹೆಸರಿನ ಮಾರಣಾಂಯಿಕ ವೈರಸ್​ ಕಾಣಿಸಿಕೊಂಡಿತ್ತು. 650 ಜನರು ಸಾರ್ಸ್ ಗೆ ಬಲಿಯಾಗಿದ್ದರು. ಇದೀಗ ಪತ್ತೆಯಾಗಿರುವ ಕರೋನಾ ವೈರಸ್​ಗೂ ಸಾರ್ಸ್​​ಗೂ ಸಾಮ್ಯತೆ ಇರುವುದರಿಂದ ಆತಂಕ ಹೆಚ್ಚಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button