Kannada NewsKarnataka NewsLatestPolitics

*ವೀರಶೈವ ಲಿಂಗಾಯಿತರನ್ನು ಹೊರತುಪಡಿಸಿ ರಾಜ್ಯ ಆಳೋದು ಯಾರಿಂದಲೂ ಸಾಧ್ಯವಿಲ್ಲ; ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಜಾತಿ ಗಣತಿಯನ್ನು ಅಸ್ತ್ರವನ್ನಾಗಿ ಬಳಸುವ ಯತ್ನ ನಡೆದಿದೆ. ವೀರಶೈವ ಲಿಂಗಾಯಿತರನ್ನು ಹೊರತುಪಡಿಸಿ ರಾಜ್ಯ ಆಳುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯಿತ ಮಹಾಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತರನ್ನು ಹೊರತುಪಡಿಸಿ ಬೇರೆಯವರು ರಾಜ್ಯ ಆಳಲು ಯಾಕೆಸಾಧ್ಯವಿಲ್ಲವೆಂದರೆ ನಮ್ಮಲ್ಲಿ ಎಲ್ಲಾ ತಳ ಸಮುದಾಯಗಳೂ ಸೇರಿವೆ ಎಂದರು.

Home add -Advt

ಸಂಸ್ಕಾರದ ತಿರುಳು ನಮ್ಮಲ್ಲಿ ಗಟ್ಟಿಯಾಗಿ ಉಳಿದಿದೆ. ಜಾತಿಗಣತಿ ಬಗ್ಗೆ ಸ್ಪಷ್ಟ ನಿಲುವು ಇರಬೇಕು. ಶಿಕ್ಷಣ, ಆರ್ಥಿಕತೆ, ಸ್ಥಿತಿಗತಿ ಬಗ್ಗೆ ಜನಗಣತಿ ಆಗಿದೆ. ಪಾರದರ್ಶಕ, ವೈಜ್ಞಾನಿಕ ಜನಗಣತಿ ಆಗಬೇಕು ಎಂದರು.

Related Articles

Back to top button