Kannada NewsKarnataka News

ಸಾಂಬ್ರಾದಲ್ಲಿ ಮಕ್ಕಳಿಬ್ಬರ ದುರ್ಮರಣ; ಹಬ್ಬದ ಸಂಭ್ರಮದಲ್ಲೇ ದುರ್ವಿಧಿಯ ಅಟ್ಟಹಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಬ್ಬದ ಸಂಭ್ರಮದಲ್ಲಿದ್ದ ಮಕ್ಕಳಿಬ್ಬರು ಕೆರೆಯಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ.

ಬೆಳಗಾವಿ ಸಮೀಪ ಸಾಂಬ್ರಾದಲ್ಲಿ ಭಾನುವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ. ದೀಪಾವಳಿ ತ್ಯಾಜ್ಯ ವಿಸರ್ಜನೆಗೆಂದು ಕೆರೆಗೆ ತೆರಳಿದ್ದ ಮೂವರು ಸಹೋದರಿಯರು ನೀರಿಗೆ ಬಿದ್ದಿದ್ದು, ಓರ್ವ ಬಾಲಕಿ ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಆದರೆ ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತರಾಗಿದ್ದಾರೆ.

8 ವರ್ಷದ ನೇತ್ರಾ ಈರಣ್ಣ ಕೊಳವಿ ಹಾಗೂ 6 ವರ್ಷದ ಪ್ರಿಯಾ ಈರಣ್ಣ ಕೊಳವಿ ಮೃತರು. ಸಂಧ್ಯಾ ಎನ್ನುವ ಬಾಲಕಿ ಬದುಕುಳಿದಿದ್ದಾಳೆ.

ಮೂವರೂ ಮಕ್ಕಳು ತ್ಯಾಜ್ಯ ವಿಸರ್ಜನೆ ವೇಳೆ ನೀರಿಗೆ ಬಿದ್ದಿದ್ದಾರೆ. ಅಕ್ಕಪಕ್ಕದವರು ನೋಡಿ ತಕ್ಷಣವೇ ಅವರೆಲ್ಲರನ್ನೂ ಮೇಲಕ್ಕೆತ್ತಿದ್ದಾರೆ. ಆದರೆ ಓರ್ವ ಬಾಲಕಿ ಮಾತ್ರ ಬದುಕಿದಳು.

Home add -Advt

ತಂದೆ ಮಿಲ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿಗೆ ಬಂದವರು ಹಬ್ಬ ಮುಗಿಸಿ ನಿನ್ನೆಯಷ್ಟೆ ಕರ್ತವ್ಯಕ್ಕೆ ಮರಳಿದ್ದರು. ಮಕ್ಕಳು ಸಾಂಬ್ರಾ ಕೇಂದ್ರೀಯ ವಿದ್ಯಾಲಯದಲ್ಲಿ 1 ಮತ್ತು 3ನೇ ತರಗತಿಯಲ್ಲಿ ಓದುತ್ತಿದ್ದರು.

ಬೆಳಗಾವಿ ಅಧಿವೇಶನ : ನಾಳೆಯೇ ದಿನಾಂಕ ಪ್ರಕಟ; ಮಧ್ಯಾಹ್ನ ಹೊರಟ್ಟಿ ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button