Kannada NewsLatest

ಕರ್ನಾಟಕ ಸೇರಿ ಮೂರು ರಾಜ್ಯಗಳಿಗೆ 4,432.10 ಕೋಟಿ ಹೆಚ್ಚುವರಿ ಕೇಂದ್ರದ ನೆರವು

ಕರ್ನಾಟಕ ಸೇರಿ ಮೂರು ರಾಜ್ಯಗಳಿಗೆ 4,432.10 ಕೋಟಿ ಹೆಚ್ಚುವರಿ ಕೇಂದ್ರದ ನೆರವು

ಪ್ರಗತಿವಾಹಿನಿ ಸುದ್ದಿ – ನವದೆಹಲಿ :  ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಉನ್ನತ ಮಟ್ಟದ ಸಮಿತಿಯು ಹೆಚ್ಚುವರಿ ಕೇಂದ್ರ ನೆರವು ಕುರಿತು ಸಭೆ ಸೇರಿ ನೈಸರ್ಗಿಕ ವಿಪತ್ತುಗಳಲ್ಲಿ ಹಾನಿಗೊಳಗಾದ ಮೂರು ರಾಜ್ಯಗಳಾದ ಒಡಿಶಾ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶಗಳಿಗೆ 4,432.10 ಕೋಟಿ ರೂ. ಬಿಡುಗಡೆ ಮಾಡಿದೆ.

ಅಲ್ಲದೆ, ಸಂಬಂಧಪಟ್ಟ ರಾಜ್ಯಗಳಲ್ಲಿ ನೈರುತ್ಯ ಮಾನ್ಸೂನ್ ಪರಿಣಾಮವಾಗಿ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು “ಸಾಧ್ಯವಿರುವ ಎಲ್ಲ ಕ್ರಮಗಳನ್ನು” ಮುಂದುವರಿಸಲು ಗೃಹ ಸಚಿವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Home add -Advt

ಮೋದಿ ಭೇಟಿಯಾದ ಯಡಿಯೂರಪ್ಪ ನಿಯೋಗಕ್ಕೆ ನಿರಾಸೆ: ಕೇಂದ್ರದಿಂದ ಸಧ್ಯ ಪರಿಹಾರ ಸಾಧ್ಯತೆ ಇಲ್ಲ?

ಒಡಿಶಾದ ಫಾನಿ ಚಂಡಮಾರುತ, ಕರ್ನಾಟಕದ ಬರ ಮತ್ತು ಹಿಮಾಚಲ ಪ್ರದೇಶದ ಹಿಮಪಾತ ಮತ್ತು ಆಲಿಕಲ್ಲು ಮಳೆಯಿಂದ ಮೂರು ರಾಜ್ಯಗಳು ವಿಪತ್ತುಗಳ ಸರಣಿಯಿಂದ ನರಳುತ್ತಿವೆ. ಇದಲ್ಲದೆ, ಈ ವರ್ಷ ನಿರಂತರ ಮಳೆಯ ಪರಿಣಾಮವಾಗಿ ಕರ್ನಾಟಕ ಮತ್ತು ಹಿಮಾಚಲ ಪ್ರದೇಶವೂ ಪ್ರವಾಹಕ್ಕೆ ತುತ್ತಾಗಿದೆ.

ಇದರ ಪರಿಣಾಮವಾಗಿ, ರಾಜ್ಯಗಳು ತಮ್ಮ ಪರಿಸ್ಥಿತಿಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲು ಗೃಹ ಸಚಿವಾಲಯವು ಒಡಿಶಾಗೆ 3,338.22 ಕೋಟಿ ರೂ., ಕರ್ನಾಟಕಕ್ಕೆ 1,029.39 ಕೋಟಿ ರೂ., ಮತ್ತು ಹಿಮಾಚಲ ಪ್ರದೇಶಕ್ಕೆ 64.49 ಕೋಟಿ ರೂ.ಗಳನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎನ್‌ಡಿಆರ್‌ಎಫ್) ಅನುಮೋದಿಸಿದೆ.////

Related Articles

Back to top button