Latest

12 ವರ್ಷ ಹಗಲು- ರಾತ್ರಿ ಕುಡಿಯಲಿಕ್ಕೆ ನಂದೇನು ಉಕ್ಕಿನ ಲಿವರಾ?: ಪಂಜಾಬ್ ಸಿಎಂ ಭಗವಂತ ಮಾನ್ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಕಳೆದ 12 ವರ್ಷಗಳಿಂದ ಹಗಲು- ರಾತ್ರಿ ಕುಡಿಯುತ್ತಾರೆ ಎಂಬ ಆರೋಪಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತಸಿಂಗ್ ಮಾನ್ ಪ್ರಶ್ನೆಯ ಮೂಲಕವೇ ಉತ್ತರ ನೀಡಿದ್ದಾರೆ.

“ಕಳೆದ 12 ವರ್ಷಗಳಿಂದ ಹಗಲಿರುಳು ಕುಡಿಯುತ್ತಿದ್ದರೆ ಒಬ್ಬ ವ್ಯಕ್ತಿ ಬದುಕಿರಬಹುದೇ..? ನನಗೆ ಉಕ್ಕಿನ ಲಿವರ್ ಇದೆಯೇ?” ಎಂದು ಮಾನ್ ಟಿವಿ ಶೋ ಒಂದರಲ್ಲಿ ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮ ಮೇಲಿನ ಕುಡಿತದ ಚಟದ ಆರೋಪ ನಿರಾಕರಿಸಿದ್ದಾರೆ.

ಭಗವಂತ ಮಾನ್ ಅವರು ಹಗಲು- ರಾತ್ರಿ ಕುಡಿದಿರುತ್ತಾರೆ, ಅಂತ್ಯಸಂಸ್ಕಾರವೊಂದರ ವೇಳೆ, ಗುರುದ್ವಾರದಲ್ಲೂ ಕುಡಿದು ಪ್ರವೇಶ ಮಾಡಿದ್ದಾರೆ ಎಂದು ಪ್ರತಿಪಕ್ಷದವರು ಆರೋಪಿಸಿದ್ದು ಇದಕ್ಕೆ ಮಾನ್ ತಿರುಗೇಟು ನೀಡಿದ್ದಾರೆ. “ಒಬ್ಬ ವ್ಯಕ್ತಿ 12 ವರ್ಷ ಹಗಲು- ರಾತ್ರಿ ಕುಡಿದಿದ್ದರೆ ಆತ ಬದುಕಲು ಸಾಧ್ಯವೇ?” ಎಂದು ಪ್ರಶ್ನಿಸಿರುವ ಮಾನ್ “ಪ್ರತಿಪಕ್ಷದವರಿಗೆ ನನ್ನ ಬಗ್ಗೆ ಆರೋಪಿಸಲು ಏನೂ ಸಿಗುತ್ತಿಲ್ಲ. ಹೀಗಾಗಿ ಇಂಥ ಕ್ಷುಲ್ಲಕ ಆರೋಪಗಳನ್ನು ಎಸಗುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button