Kannada NewsKarnataka News

ಕಾಗವಾಡ ಮತಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಭಾರತಿಯ ಜನತಾ ಪಕ್ಷ ತನ್ನ ಆಡಳಿತಾವಧಿಯಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದೆ. ರೈತರ ಹಾಗೂ ದೀನದಲಿತರ ಧ್ವನಿಯಾಗಿರುವ ಪಕ್ಷ, ರಾಜ್ಯದ ಅಭಿವೃದ್ಧಿಯಲ್ಲಿ ಹಗಲಿರುಳು ಶ್ರಮಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

ಅವರು ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಅವರ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು ಐನಾಪುರ, ಮೊಳೆ, ಉಗಾರ , ಕೃಷ್ಣಾ ಕಿತ್ತೂರಲ್ಲಿ ಮಾತನಾಡಿದರು.

ಬಿಜೆಪಿ ತನ್ನ ನಿಲುವುಗಳಿಗೆ ಸದಾಬದ್ಧವಾಗಿದೆ. ಜನತೆಯ ಕಲ್ಯಾಣವೇ ಅದರ ಸಂಕಲ್ಪವಾಗಿದ್ದು ಅಹರ್ನಿಶಿ ಶ್ರಮಿಸುತ್ತಿದೆ. ನೆರೆಪ್ರವಾಹದಲ್ಲಿ ಪಕ್ಷ ಸ್ಪಂದಿಸಿದ ರೀತಿ ದೇಶದಲ್ಲಿಯೇ ಮಾದರಿಯೆನಿಸಿದೆ.

ಇಂದು ಕೇಂದ್ರದಲ್ಲಿ ಮೋದಿಯವರು ಕೈಗೊಂಡಿರುವ ಕ್ರಮಗಳು ಐತಿಹಾಸಿಕವೆನಿಸಿವೆ. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಅವರು ಕೈಗೊಂಡ ಸಂಕಲ್ಪಕ್ಕೆ ಜಗತ್ತೇ ನಿಬ್ಬೆರಗಾಗಿದೆ. ಶ್ರೀಮಂತ ಪಾಟೀಲ ಅವರಿಗೆ ಬಹುಮತವನ್ನು ನೀಡುವುದರೊಂದಿಗೆ ಬಿಜೆಪಿಗೆ ಬಲತುಂಬಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ,  ಸಚಿವರಾದ ಜಗದೀಶ ಶೆಟ್ಟರ, ಸಿ.ಸಿ.ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button