Belagavi NewsBelgaum NewsKarnataka NewsLatest

*ಹುಟ್ಟುಹಬ್ಬದ ಹಿನ್ನೆಲೆ: ಕುಟುಂಬ ಸಮೇತರಾಗಿ ನಾಗನಾಥ ಜ್ಯೋತಿರ್ಲಿಂಗ, ವೈಜನಾಥ ಜ್ಯೋತಿರ್ಲಿಂಗ ದರ್ಶನ ಪಡೆದ ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ: ಕೆ.ಎಲ್.ಇ ಸಂಸ್ಥೆ ನಿರ್ದೇಶಕ ಡಾ.ಪ್ರಭಾಕರ ಕೋರೆ ಅವರ 77ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಡಾ.ಪ್ರಭಾಕರ ಕೋರೆ ಕುಟುಂಬ ಸಮೇತ ದೇವಾಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಡಾ: ಪ್ರಭಾಕರ ಕೋರೆ ಹಾಗೂ ಕುಟುಂಬದವರು ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಔಂದಾ ಶ್ರೀ ನಾಗನಾಥ ಜ್ಯೋತಿರ್ಲಿಂಗ ಹಾಗೂ ಭೀಡ ಜಿಲ್ಲೆಯ ಪರಳಿ ಶ್ರೀ ವೈಜನಾಥ ಜ್ಯೋತಿರ್ಲಿಂಗ ದರ್ಶನ ಪಡೆದು ರುದ್ರಾಭಿಷೇಕ ನೆರವೇರಿಸಿದರು. ಈ ವೇಳೆ ಪತ್ನಿ ಆಶಾ ಕೋರೆ, ಡಾ.ಪ್ರೀತಿ ಕೋರೆ ದೊಡವಾಡ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎರಡು ದೇವಾಲಯಗಳ ಟ್ರಸ್ಟ್ ಕಮೀಟಿಯ ಸದಸ್ಯರು ಡಾ.ಪ್ರಭಾಕರ ಕೋರೆಯವರನ್ನು ಸತ್ಕರಿಸಿ ಶುಭಕೋರಿದರು.

ಲಿಂಗರಾಜ ಕಾಲೇಜಿನ ವತಿಯಿಂದ ವನ ಮಹೋತ್ಸವ ಹಾಗೂ ಹಣ್ಣುಹಂಪಲ ವಿತರಣೆ
ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಡಾ.ಪ್ರಭಾಕರ ಕೋರೆಯವರ ೭೭ನೇ ಹುಟ್ಟಹಬ್ಬದ ನಿಮಿತ್ತವಾಗಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು. ಅಂತೆಯೆ ಬೆಳಗಾವಿ ಸ್ವಾಮೀ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕರ ಕೇಂದ್ರಕ್ಕೆ ಭೇಟಿ ನೀಡಿ ಹಣ್ಣುಹಂಪಲ ಹಾಗೂ ಸಿಹಿ ತಿಂಡಿಯನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿಯವರು ಡಾ.ಕೋರೆಯವರದು ಅನನ್ಯ ಸಾಧನೆ. ಸಾಮಾಜಿಕವಾಗಿ ಅವರು ನೀಡಿರುವ ಕೊಡುಗೆ ಬೆಲೆಕಟ್ಟಲಾರದ್ದು. ಅವರು ಶತಾಯುಷಿಗಳಾಗಿ ಇನ್ನಷ್ಟು ಸೇವೆಗಳನ್ನು ನೀಡಲೆಂದು ಹೇಳಿದರು. ಪದವಿಪೂರ್ವ ಪ್ರಾ.ಗಿರಿಜಾ ಹಿರೇಮಠ, ಡಾ.ಜಿ.ಎನ್.ಶೀಲಿ, ಡಾ.ಎಚ್.ಎಸ್.ಚೆನ್ನಪ್ಪಗೋಳ, ಡಾ.ಸಿ.ರಾಮರಾವ್, ಡಾ.ನಂದಿನಿ, ಡಾ.ಮಲ್ಲಣ್ಣ, ಡಾ.ರಾಘವೇಂದ್ರ ಹಜಗೋಳ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ
ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ರಕ್ತಭಂಡಾರಕ್ಕೆ ರಕ್ತದಾನವನ್ನು ಮಾಡುವುದರ ಮೂಲಕ ವಿಶಿಷ್ಠವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಜ್ಯೋತಿ ಹಿರೇಮಠ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಆಲಪ್ಪನವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button